‘ಆಪರೇಷನ್ ಕಾವೇರಿ’ ಅಡಿ ಸ್ಥಳಾಂತರ ಕಾರ್ಯಾಚರಣೆ: ಯುದ್ಧಪೀಡಿತ ಸುಡಾನಿನಿಂದ ಹೊರಟ ಭಾರತೀಯರ ಮೊದಲ ಬ್ಯಾಚ್

ನವದೆಹಲಿ: ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಆರಂಭವಾಗಿದ್ದು, ಮೊದಲ ಬ್ಯಾಚ್‌ ಬಾರತೀಯ ನೌಕಾಪಡೆಯ ಯುದ್ಧನೌಕೆಯಲ್ಲಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ಇಂದು, ಸೋಮವಾರ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್‌ಎಸ್ ಸುಮೇಧಾ ಹಡಗಿನಲ್ಲಿರುವ ಭಾರತೀಯರ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ತಮ್ಮ ತೆರವಿಗೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಲು ರಾಷ್ಟ್ರಧ್ವಜವನ್ನು ಹಿಡಿದುಕೊಂಡಿದ್ದಾರೆ.
ಆಪರೇಷನ್ ಕಾವೇರಿ ಅಡಿಯಲ್ಲಿ ನಡೆಯುತ್ತಿರುವ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯಲ್ಲಿ ಮೊದಲ ಬ್ಯಾಚ್ ಸುಡಾನ್‌ನಿಂದ ಹೊರಡುತ್ತಿದೆ. 278 ಜನರೊಂದಿಗೆ ಐಎನ್‌ಎಸ್ ಸುಮೇಧಾ ಹಡಗಿನಲ್ಲಿ ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಹೊರಟಿದೆ ಎಂದು ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಈಗ ಸ್ಥಳಾಂತರಿಸಿದ ಭಾರತೀಯರ ತಂಡದಲ್ಲಿ ಮಕ್ಕಳೂ ಸೇರಿದ್ದಾರೆ. ಭಾರತವು ಎರಡು ಸಾರಿಗೆ ವಿಮಾನಗಳನ್ನು ಜೆಡ್ಡಾದಲ್ಲಿ ಮತ್ತು ಯುದ್ಧ ಹಡಗು INS ಸುಮೇಧಾವನ್ನು ಪೋರ್ಟ್ ಸುಡಾನ್‌ನಲ್ಲಿ ಇರಿಸಿತ್ತು. ಜೆಡ್ಡಾ ತಲುಪಿದ ನಂತರ ಭಾರತೀಯರನ್ನು ವಿಮಾನದಲ್ಲಿ ಮನೆಗೆ ಕರೆತರಲಾಗುತ್ತದೆ. ಸುಡಾನ್‌ನಾದ್ಯಂತ ಸುಮಾರು 3,000 ಭಾರತೀಯರಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಸುಡಾನ್‌ ರಾಜಧಾನಿ ಖಾರ್ಟೂಮ್‌ನ ಹಲವಾರು ಸ್ಥಳಗಳಿಂದ ಭೀಕರ ಹೋರಾಟದ ವರದಿಯಾಗಿದ್ದು, ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿ ಅಸ್ಥಿರವಾಗಿದೆ. ಕಳೆದ ವಾರ ಶುಕ್ರವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಡಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ತುರ್ತು ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರು.
ಕದನ ವಿರಾಮದ ಕುರಿತು ಮಾತುಕತೆಗೆ ದಾರಿ ಮಾಡಿಕೊಡಲು 72 ಗಂಟೆಗಳ ಕಾಲ ಗುಂಡಿನ ದಾಳಿ ನಿಲ್ಲಿಸಲು ಎರಡು ತಂಡಗಳ ನಡುವೆ ಆದ ಒಪ್ಪಂದದ ಹೊರತಾಗಿಯೂ ಇಂದು, ಸೋಮವಾರ ಖಾರ್ಟೂಮ್‌ನ ಕೆಲವು ಭಾಗಗಳಲ್ಲಿ ವಿರಳ ಗುಂಡಿನ ಸದ್ದು ಮೊಳಗಿತು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಏರ್ ಸ್ಟ್ರೈಕ್‌ಗಳು ಮತ್ತು ಫಿರಂಗಿ ಬ್ಯಾರೇಜ್‌ಗಳು ಸೇರಿದಂತೆ ಹತ್ತು ದಿನಗಳ ಭಾರೀ ಹೋರಾಟವು ನೂರಾರು ಜನರನ್ನು ಕೊಂದಿದೆ, ಅವರಲ್ಲಿ ಅನೇಕರು ನಾಗರಿಕರು ಸತ್ತಿದ್ದಾರೆ.
ಆದರೆ ಇತರ ಪ್ರದೇಶಗಳಲ್ಲಿ ಬೇರೆ ಬೇರೆ ದೇಶಗಳ ಸರ್ಕಾರಗಳು ಸಿಕ್ಕಿಬಿದ್ದರುವ ತಮ್ಮ ದೇಶದವರನ್ನು ಹೊರತರಲು ವಿಮಾನಗಳು ಮತ್ತು ಹಡಗುಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ ನಂತರ ಹೋರಾಟದ ತೀವ್ರತೆಯು ಕಡಿಮೆಯಾಗಿದೆ.
ಈ ಹೋರಾಟವು ಸುಡಾನ್ ಸೇನಾ ಮುಖ್ಯಸ್ಥ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್‌ಗೆ ನಿಷ್ಠಾವಂತ ಪಡೆಗಳು ಹಾಗೂ ಅವರ ಮಾಜಿ ಡೆಪ್ಯೂಟಿ ಮೊಹಮದ್ ಹಮ್ದಾನ್ ಡಾಗ್ಲೋ ಅವರ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement