50000 ಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಅಭ್ಯರ್ಥಿಗಳು ಇವರು

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿದೆ. ಆಡಳಿತಾರೂಢ ಬಿಜೆಪಿ 65 ಸ್ಥಾನ ಗಳಿಸಿ ಸೋಲನುಭವಿಸಿದರೆ ಜೆಡಿಎಸ್ 19 ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದ 10 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದೆ. ಬಿಜೆಪಿ ಎರಡು ಸ್ಥಾನಗಳಲ್ಲಿ ಅತಿಹೆಚ್ಚು ಅಂತರದಿಂದ ಗೆದ್ದಿದೆ.. ಬಿಜೆಪಿ ಎರಡು ಸ್ಥಾನಗಳಲ್ಲಿ ಅತಿಹೆಚ್ಚು ಅಂತರದಿಂದ ಗೆದ್ದಿದೆ.
50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳು…
ಕನಕಪುರ ಕ್ಷೇತ್ರ : ಡಿ.ಕೆ.ಶಿವಕುಮಾರ್ (ಕಾಂಗ್ರೆಸ್):
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು 1,22,393 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿವಕುಮಾರ ಅವರು 1,43,023 ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದಲ್ಲಿ ಚಲಾವಣೆಯಾದ 75.03% ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.
ಚಿಕ್ಕೋಡಿ ಮತಕ್ಷೇತ್ರ ; ಗಣೇಶ ಪ್ರಕಾಶ ಹುಕ್ಕೇರಿ (ಕಾಂಗ್ರೆಸ್):
ಕಾಂಗ್ರೆಸ್ ಅಭ್ಯರ್ಥಿ ಗಣೇಶ ಪ್ರಕಾಶ ಹುಕ್ಕೇರಿ ಅವರು ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ವಿರುದ್ಧ 78,509 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗಣೇಶ ಹುಕ್ಕೇರಿ 1,27,324 ಮತಗಳನ್ನು ಗಳಿಸಿ ಚಲಾವಣೆಯಾದ ಮತಗಳಲ್ಲಿ 69.82 ರಷ್ಟು ಮತ ಗಳಿಸಿದ್ದಾರೆ.
ಅಥಣಿ ಮತಕ್ಷೇತ್ರ : ಲಕ್ಷ್ಮಣ ಸವದಿ (ಕಾಂಗ್ರೆಸ್)…
ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಅವರು ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು 76,122 ಮತಗಳ ಅಂತರದಿಂದ ಸೋಲಿಸಿದ್ದಾರೆ. ಲಕ್ಷ್ಮಣ ಸವದಿ ಅವರು ಚಲಾವಣೆಯಾದ 68.34% ಮತಗಳಷ್ಟು ಅಂದರೆ 1,30,478 ಮತಗಳನ್ನು ಪಡೆದರು. ಸವದಿ ಅವರ ಪ್ರತಿಸ್ಪರ್ಧಿ ಕುಮಠಳ್ಳಿ 54,805 ಮತಗಳನ್ನು ಪಡೆದರು.
ಬೆಂಗಳೂರು ಪುಲಕೇಶಿನಗರ ಮತಕ್ಷೇತ್ರ : ಎ.ಸಿ.ಶ್ರೀನಿವಾಸ (ಕಾಂಗ್ರೆಸ್)…:
ಪುಲಕೇಶಿನಗರದ ಕಾಂಗ್ರೆಸ್ ಅಭ್ಯರ್ಥಿ ಎಸಿ ಶ್ರೀನಿವಾಸ್ ಅವರು ತಮ್ಮ ಪ್ರತಿಸ್ಪರ್ಧಿ ಬಿಎಸ್ಪಿ ಅಭ್ಯರ್ಥಿ ಅಖಂಡ ಶ್ರೀನಿವಾಸ ಮೂರ್ತಿ ಆರ್. ಅವರನ್ನು 62,210 ಮತಗಳ ಅಂತರದಿಂದ ಸೋಲಿಸಿದ್ದಾರೆ. ಶ್ರೀನಿವಾಸ ಅವರು 87,214 ಮತಗಳನ್ನುಪಡೆದಿದ್ದಾರೆ. ಅಂದರೆ ಚಲಾವಣೆಯಾದ 66.72% ಮತಗಳನ್ನು ಪಡೆದರು. ಅವರ ಪ್ರತಿಸ್ಪರ್ಧಿ ಅಖಂಡ ಶ್ರೀನಿವಾಸ ಮೂರ್ತಿ 25,106 ಮತಗಳನ್ನು ಮತಗಳನ್ನು ಪಡೆದರು.
ಕೊಳ್ಳೇಗಾಲಮತಕ್ಷೇತ್ರ : ಎ.ಆರ್.ಕೃಷ್ಣಮೂರ್ತಿ (ಕಾಂಗ್ರೆಸ್)..:
ಕೊಳ್ಳೇಗಾಲದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎನ್.ಮಹೇಶ ಅವರನ್ನು 59,519 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕೃಷ್ಣಮೂರ್ತಿ ಅವರು 1,08,363 ಮತಗಳನ್ನು ಪಡೆದರು. ಅಂದರೆ ಚಲಾವಣೆಯಾದ ಮತಗಳಲ್ಲಿ 64.59% ಮತಗಳನ್ನು ಪಡೆದರು. ಮಹೇಶ ಅವರು 48,844 ಮತಗಳನ್ನು ಪಡೆದರು.
ಯಮಕನಮರಡಿ ಮತಕ್ಷೇತ್ರ : ಸತೀಶ ಜಾರಕಿಹೊಳಿ (ಕಾಂಗ್ರೆಸ್)….
ಯಮಕನಮರಡಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ಬಿಜೆಪಿ ಅಭ್ಯರ್ಥಿ ಬಸವರಾಜ ಹುಂಡ್ರಿ ಅವರ ವಿರುದ್ಧ 57,211 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸತೀಶ ಜಾರಕಿಹೊಳಿ 1,00,290 ಮತಗಳನ್ನು ಪಡೆದು ಚಲಾವಣೆಯಾದ ಮತಗಳಲ್ಲಿ 60.25% ಮತಗಳನ್ನು ಪಡೆದಿದ್ದಾರೆ.
ಬೆಳಗಾವಿ ಗ್ರಾಮಾಂತರ ಮತಕ್ಷೇತ್ರ : ಲಕ್ಷ್ಮೀ ಆರ್ ಹೆಬ್ಬಾಳ್ಕರ್ (ಕಾಂಗ್ರೆಸ್)..
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ ಅವರು ಬಿಜೆಪಿ ಅಭ್ಯರ್ಥಿ ನಾಗೇಶ ಅಣ್ಣಪ್ಪ ಮನೋಳ್ಕರ ಅವರನ್ನು 56,016 ಮತಗಳ ಅಂತರದಿಂದ ಸೋಲಿಸಿದ್ದಾರೆ. ಹೆಬ್ಬಾಳ್ಕರ ಅವರು 1,07,619 ಮತಗಳನ್ನು ಪಡೆದು ಚಲಾವಣೆಯಾದ ಮತಗಳ ಶೇ.52.61ರಷ್ಟು ಮತ ಗಳಿಸಿದ್ದಾರೆ.
ಸರ್ವಜ್ಞನಗರ ಮತಕ್ಷೇತ್ರ : ಕೆ.ಜೆ. ಜಾರ್ಜ್ (ಕಾಂಗ್ರೆಸ್)….
ಬೆಂಗಳೂರಿನ ಸರ್ವಜ್ಞನಗರ ಕಾಂಗ್ರೆಸ್ ಅಭ್ಯರ್ಥಿ ಕೆ.ಜೋಸೆಫ್ ಜಾರ್ಜ್ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಪದ್ಮನಾಭ ರೆಡ್ಡಿ ವಿರುದ್ಧ 55,768 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜೋಸೆಫ್ ಜಾರ್ಜ್ 1,18,783 ಮತಗಳನ್ನು ಪಡೆದು ಚಲಾವಣೆಯಾದ ಮತಗಳಲ್ಲಿ 61.04%ರಷ್ಟು ಮತಗಳನ್ನು ಪಡೆದರು.
ಪದ್ಮನಾಭ ನಗರ ಮತಕ್ಷೇತ್ರ: ಆರ್ ಅಶೋಕ (ಬಿಜೆಪಿ)
ನಿರ್ಗಮಿತ ಕಂದಾಯ ಸಚಿವ, ಪದ್ಮನಾಭ ನಗರ ಬಿಜೆಪಿ ಅಭ್ಯರ್ಥಿ ಆರ್.ಅಶೋಕ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿ ರಘುನಾಥ ನಾಯ್ಡು ವಿರುದ್ಧ 55,175 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಶೋಕ ಅವರು 98,750 ಮತಗಳನ್ನು ಪಡೆದು ಚಲಾವಣೆಯಾದ ಒಟ್ಟು ಮತಗಳಲ್ಲಿ 61.72% ಮತಗಳನ್ನು ಪಡೆದರು.
ಬಸವನಗುಡಿ ಮತಕ್ಷೇತ್ರ : ರವಿ ಸುಬ್ರಹ್ಮಣ್ಯ (ಬಿಜೆಪಿ)..:
ಬಸವನಗುಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಯು.ಬಿ.ವೆಂಕಟೇಶ ಅವರನ್ನು 54,978 ಮತಗಳ ಅಂತರದಿಂದ ಸೋಲಿಸಿದ್ದಾರೆ. ರವಿ ಸುಬ್ರಹ್ಮಣ್ಯ ಅವರು 78,854 ಮತಗಳನ್ನು ಪಡೆದು ಚಲಾವಣೆಯಾದ ಮತಗಳಲ್ಲಿ 61.47%ರಷ್ಟು ಮತಗಳನ್ನು ಪಡೆದರು.

ಪ್ರಮುಖ ಸುದ್ದಿ :-   ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement