ಪ್ರತಾಪಗಢ : ಉತ್ತರ ಪ್ರದೇಶದ ಪ್ರತಾಪ್ಗಢದಲ್ಲಿ ಮಂಗಳವಾರ, ಜೂನ್ 14 ರಂದು ಮದುವೆಯ ʼಜಯ ಮಾಲಾ’ ಸಮಾರಂಭದಲ್ಲಿ ವರ ಮತ್ತು ವಧುವಿನ ಕುಟುಂಬಗಳ ನಡುವೆ ವಾಗ್ವಾದ ನಡೆದ ನಂತರ ಮದುವೆ ಸಮಾರಂಭದಲ್ಲಿ ಜಗಳ ಉಲ್ಬಣಗೊಂಡು ವರನನ್ನು ಮರಕ್ಕೆ ಕಟ್ಟಿಹಾಕಿದ ಘಟನೆ ವರದಿಯಾಗಿದೆ.
ಜಗಳಕ್ಕೆ ಕಾರಣ ವರ – ಅಮರಜೀತ ವರ್ಮಾ – ವಧುವಿನ ಕುಟುಂಬದಿಂದ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ.
‘ಜಯ ಮಾಲಾ’ ಸಮಾರಂಭದಲ್ಲಿ, ಅಮರಜೀತನ ಸ್ನೇಹಿತರು ಅನುಚಿತವಾಗಿ ವರ್ತಿಸಿದರು, ಇದು ವಧು-ವರರ ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡ ನಂತರ ವರ ಅಮರಜೀತ ಕೂಡ ವಧುವಿನ ಕುಟುಂಬದ ಮುಂದೆ ವರದಕ್ಷಿಣೆ ಬೇಡಿಕೆಗಳನ್ನು ಮುಂದಿಟ್ಟರು.
ಹಲವು ಸುತ್ತಿನ ಮಾತುಕತೆಗಳ ನಂತರವೂ ಎರಡೂ ಕುಟುಂಬಗಳು ಒಪ್ಪಂದಕ್ಕೆ ಬರಲು ವಿಫಲವಾದ ನಂತರ ವರನನ್ನು ವಧುವಿನ ಕಡೆಯಿಂದ ಹಲವಾರು ಗಂಟೆಗಳ ಕಾಲ ಮರಕ್ಕೆ ಕಟ್ಟಿಹಾಕಿದರು. ನಂತರ ಮಾಂಧಾಟ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವರನನ್ನು ಬಿಡುಗಡೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಎಚ್ಒ ಮಾಂಧಾತಾ, ‘ಪೊಲೀಸ್ ಠಾಣೆಗೆ ಎರಡೂ ಕಡೆಯವರು ಬಂದಿದ್ದರು, ಆದರೆ ಇನ್ನೂ ರಾಜಿ ಮಾಡಿಕೊಂಡಿಲ್ಲ’ ಎಂದರು. ವರನ ಸ್ನೇಹಿತರು ಅನುಚಿತವಾಗಿ ವರ್ತಿಸಿದರು, ಇದು ಎರಡು ಕಡೆಯ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ನಡುವೆ, ವರನು ವರದಕ್ಷಿಣೆಗಾಗಿ ಬೇಡಿಕೆಗಳನ್ನು ಇಟ್ಟಿದ್ದಾನೆ. ಎಂದು ಅವರು ತಿಳಿಸಿದರು.
ಮದುವೆ ಸಮಾರಂಭದ ವ್ಯವಸ್ಥೆಯಲ್ಲಿ ಮಹಿಳೆಯ ಕಡೆಯವರು ತಮ್ಮ ವೆಚ್ಚವನ್ನು ಪರಿಹಾರ ಪಡೆಯಲು ಎರಡು ಕುಟುಂಬಗಳ ನಡುವೆ ಸಭೆ ಕೂಡ ನಡೆಯುತ್ತಿದೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ