ಬೈಲಹೊಂಗಲ : ವಿದ್ಯುತ್‌ ಅವಘಡ ; ತಂದೆ-ಮಗ ಸಾವು

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕು ಉಡಿಕೇರಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ತಂದೆ-ಮಗ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಪ್ರಭಾಕರ ಹುಂಬಿ (71) ಮತ್ತು ಮಂಜುನಾಥ ಹುಂಬಿ(31)ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಪ್ರಭಾಕರ ಅವರು ಶುಕ್ರವಾರ ಬೆಳಗ್ಗೆ ದನದ ಕೊಟ್ಟಿಗೆಗೆ ಹೋಗಿ ಆಕಳಿಗೆ ಅಹಾರ ನೀಡಿದ್ದಾರೆ. ನಂತರ ಹೊರಗೆ ವಿದ್ಯುತ್ ಕಂಬ ಸ್ಪರ್ಷವಾಗಿದೆ. ಆಗ ಅವರಿಗೆ ವಿದ್ಯುತ್ ಪ್ರವಹಿಸಿದೆ. ಕಂಬಕ್ಕೆ ಸಪೋರ್ಟ್ ಆಗಿ ನಿಲ್ಲಿಸಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಅವರು ವಿದ್ಯುತ್‌ ಆಘಾತಕ್ಕೆ ಒಳಗಾಗಿದ್ದಾರೆ. ಇದನ್ನು ಕಂಡ ಮಗ ಮಂಜುನಾಥ ತಂದೆಯ ಸಹಾಯಕ್ಕೆ ಧಾವಿಸಿದಾಗ ಅವರ ದೇಹದಲ್ಲಿಯೂ ವಿದ್ಯುತ್‌ ಪ್ರವಹಿಸಿದೆ. ಪ್ರಭಾಕರ ಸ್ಥಳದಲ್ಲೇ ಮೃತರಾದರೆ ಮಗ ಮಂಜುನಾಥ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಮಳೆಯಾಗಿದ್ದ ಕಾರಣ ವಿದ್ಯುತ್ ಕಂಬಕ್ಕೆ ಸಪೋರ್ಟ್ ಆಗಿ ಹಾಕಿದ್ದ ತಂತಿಗೆ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement