ಶಿವಸೇನೆ Vs ಶಿವಸೇನೆ ಪ್ರಕರಣದಲ್ಲಿ ಅನರ್ಹತೆ ಅರ್ಜಿ ಬಗ್ಗೆ ನಿರ್ಧರಿಸಲು ಸ್ಪೀಕರ್‌ಗೆ ಗಡುವು ನಿಗದಿಗೆ ಸೂಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ ಶಿವಸೇನೆ ಶಾಸಕರ ಅನರ್ಹತೆಯ ಅರ್ಜಿಗಳನ್ನು ನಿರ್ಧರಿಸಲು ಸಮಯ ನಿಗದಿಪಡಿಸುವಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಈಗಾಗಲೇ ಸುಮಾರು ಐದು ತಿಂಗಳ ಕಾಲಾವಕಾಶವನ್ನು ನೀಡಲಾಗಿದ್ದು, ಇನ್ನೂ ವಿಳಂಬ ಮಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯವು ನಾರ್ವೇಕರ್ ಅವರಿಗೆ ಎಚ್ಚರಿಕೆ ನೀಡಿತು. ಮತ್ತು ನ್ಯಾಯಾಲಯದ ಮೇ 11 ರ ತೀರ್ಪಿನ ನಂತರ ಯಾವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ತಿಳಿಸುವಂತೆ ಹೇಳಿತು, ಒಂದು “ಸಮಂಜಸವಾದ ಸಮಯದಲ್ಲಿ ಅರ್ಜಿಗಳ ಕುರಿತು ತೀರ್ಪು ನೀಡುವಂತೆ ಸೂಚಿಸಿತು.
ಮಹಾರಾಷ್ಟ್ರದ ರಾಜಕೀಯ ವಿವಾದದ ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ತಾನು ನೀಡಿದ ನಿರ್ದೇಶನಗಳಿಗೆ ಗೌರವ ಮತ್ತು ಘನತೆಯನ್ನು ನಿರೀಕ್ಷಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಶಿವಸೇನೆಯ ಶಾಸಕರ ಅನರ್ಹತೆಯ ಅರ್ಜಿಗಳನ್ನು ನಿರ್ಧರಿಸುವಲ್ಲಿ ವಿಳಂಬವಾದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು “ಸಭಾಧ್ಯಕ್ಷರು ಸುಪ್ರೀಂ ಕೋರ್ಟ್‌ನ ಘನತೆಯನ್ನು ಗೌರವಿಸಬೇಕು” ಎಂದು ಹೇಳಿದರು.

ವಿಚಾರಣೆ ಆರಂಭಿಸಿದ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್
ನಾಲ್ಕು ದಿನಗಳ ಹಿಂದೆ ಸೆಪ್ಟೆಂಬರ್ 14 ರಂದು, ಮಹಾರಾಷ್ಟ್ರ ಅಸೆಂಬ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಎರಡು ಪ್ರತಿಸ್ಪರ್ಧಿ ಶಿವಸೇನೆ ಬಣಗಳು ಪರಸ್ಪರ ಸಲ್ಲಿಸಿದ ಅನರ್ಹತೆ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿದರು.
ಒಟ್ಟು 34 ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಎರಡೂ ಬಣಗಳನ್ನು ಆಯಾ ವಕೀಲರು ಪ್ರತಿನಿಧಿಸುತ್ತಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ ನೇತೃತ್ವದ ಶಿವಸೇನೆಯ ವಕೀಲ ಅನಿಲ್ ಸಾಖ್ರೆ, ತಮ್ಮ ತಂಡವು ಎದುರು ಬಣದಿಂದ ಸೂಕ್ತ ದಾಖಲೆಗಳನ್ನು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಬಣದ ಶಾಸಕ ರವೀಂದ್ರ ವೈಕರ್ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ , ಶಿಂಧೆ ಗುಂಪಿನ ಹಕ್ಕು (ದಾಖಲೆಗಳನ್ನು ಪಡೆಯದಿರುವುದು) ಅದರ ವಿಳಂಬ ತಂತ್ರದ ಭಾಗವಾಗಿದೆ ಎಂದು ಹೇಳಿದ್ದಾರೆ. ಎರಡೂ ಪಕ್ಷಗಳಿಗೆ ಎಲ್ಲಾ ಸಂಬಂಧಿತ ದಾಖಲೆಗಳನ್ನು ಒದಗಿಸುವುದು ಸ್ಪೀಕರ್‌ಗೆ ಸಂಬಂಧಿಸಿದೆ. ಠಾಕ್ರೆ ಬಣವು ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಬೇಕೆಂದು ಬಯಸಿದೆ” ಎಂದು ಅವರು ಹೇಳಿದರು. ಠಾಕ್ರೆ ಬಣಕ್ಕೆ ಸೇರಿದ ಸುನೀಲ್ ಪ್ರಭು ಹೊರಡಿಸಿದ ವಿಪ್ ಅನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ ಎಂದು ವೈಕರ್ ಹೇಳಿದರು.
ಮುಂದಿನ ವಾರ ವಿಚಾರಣೆ ಪುನರಾರಂಭವಾಗಲಿದೆ. ಜುಲೈನಲ್ಲಿ ಸ್ಪೀಕರ್ ನಾರ್ವೇಕರ್ ಅವರು ಶಿಂಧೆ ನೇತೃತ್ವದ ಶಿವಸೇನೆಯ 40 ಶಾಸಕರು ಮತ್ತು ಠಾಕ್ರೆ ಬಣದ 14 ಶಾಸಕರಿಗೆ ತಮ್ಮ ವಿರುದ್ಧದ ಅನರ್ಹತೆ ಅರ್ಜಿಗಳಿಗೆ ಉತ್ತರ ನೀಡುವಂತೆ ನೋಟಿಸ್ ನೀಡಿದ್ದರು.
ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಒಟ್ಟು 54 ಶಾಸಕರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಕಳೆದ ವರ್ಷ ಶಿವಸೇನೆ ವಿಭಜನೆಯ ನಂತರ ಚುನಾಯಿತರಾದ ಶಿವಸೇನೆ (ಯುಬಿಟಿ) ಶಾಸಕ ರುತುಜಾ ಲಟ್ಕೆ ವಿರುದ್ಧ ನೋಟಿಸ್ ನೀಡಲಾಗಿಲ್ಲ.
ಪ್ರಭು ಅವರು ಅವಿಭಜಿತ ಶಿವಸೇನೆಯ ಮುಖ್ಯ ಸಚೇತಕರಾಗಿ ಕಳೆದ ವರ್ಷ ಶಿಂಧೆ ಮತ್ತು ಇತರ 15 ಶಾಸಕರ ವಿರುದ್ಧ ಅನರ್ಹತೆ ಅರ್ಜಿಯನ್ನು ಸಲ್ಲಿಸಿದ್ದರು ಮತ್ತು ಶಿಂಧೆ ಅವರು ಬಂಡಾಯವೆದ್ದರು ಮತ್ತು ಜೂನ್ 2022 ರಲ್ಲಿ ಹೊಸ ಸರ್ಕಾರವನ್ನು ರಚಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆ ಕೈಜೋಡಿಸಿದರು. .
ಮೇ 11 ರಂದು ಸುಪ್ರೀಂ ಕೋರ್ಟ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ ಶಿಂಧೆ ಮುಂದುವರಿಯುತ್ತಾರೆ ಎಂದು ತೀರ್ಪು ನೀಡಿತು. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸಮ್ಮಿಶ್ರ ಸರ್ಕಾರವನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ, ಏಕೆಂದರೆ ಶಿಂಧೆ ಅವರ ಬಂಡಾಯದ ಹಿನ್ನೆಲೆಯಲ್ಲಿ ಉದ್ಧವ್‌ ಠಾಕ್ರೆ ಸದನದಲ್ಲಿ ಬಹುಮತ ಪರೀಕ್ಷೆಯನ್ನು ಎದುರಿಸದೆ ರಾಜೀನಾಮೆ ನೀಡಿದ್ದಾರೆ ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement