ಕೇರಳದ ತ್ರಿವಳಿ ಸ್ಫೋಟ ಘಟನೆ : ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿಯಲ್ಲಿ ಶರಣಾದ ವ್ಯಕ್ತಿಯ ಬಂಧನ

ತಿರುವನಂತಪುರಂ : ಕೇರಳದ ಎರ್ನಾಕುಲಂ ಜಿಲ್ಲೆಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಹೊಣೆ ಹೊತ್ತಿದ್ದ ವ್ಯಕ್ತಿ ಡೊಮಿನಿಕ್ ಮಾರ್ಟಿನ್ ಎಂಬಾತನನ್ನು ಬಂಧಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕಗಳ ಕಾಯ್ದೆ ಮತ್ತು ಕೊಲೆ ಆರೋಪದಡಿ ಸೋಮವಾರ ಆತನನ್ನು ಬಂಧಿಸಲಾಗಿದೆ. ಕನ್ವೆನ್ಷನ್ ಸೆಂಟರ್‌ನಲ್ಲಿ ಬಾಂಬ್‌ಗಳನ್ನು ಇಟ್ಟಿರುವುದಾಗಿ ಮಾರ್ಟಿನ್ ಹೇಳಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಆತ ತ್ರಿಶೂರ್ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದ. ಶರಣಾಗುವ ಮೊದಲು, ಮಾರ್ಟಿನ್ ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದ ಹಾಗೂ ತಾನು ಕ್ರೈಸ್ತ ಪಂಥದ ಸಭೆಯಲ್ಲಿ ಸರಣಿ ಸ್ಫೋಟಗಳನ್ನು ಏಕೆ ಕಾರ್ಯಗತಗೊಳಿಸಿದ್ದೆ ಎಂಬುದನ್ನು ವಿವರಿಸಿದ್ದ.

ವೀಡಿಯೊದಲ್ಲಿ, ತಾನು ವರ್ಷಗಳ ಹಿಂದೆ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಗುಂಪಿನ ಯೆಹೋವನ ವಿಟ್ನೆಸ್‌ ನೊಂದಿಗೆ ಸಂಬಂಧ ಹೊಂದಿದ್ದೆ ಆದರೆ ಇನ್ನು ಮುಂದೆ ಅದರ ಬೋಧನೆಗಳನ್ನು ಒಪ್ಪುವುದಿಲ್ಲ ಎಂದು ಹೇಳಿಕೊಂಡಿದ್ದಾನೆ.
“ನಾನು ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಅಲ್ಲಿ ಸ್ಫೋಟವನ್ನು ನಡೆಸಿದ್ದು ನಾನೇ ಎಂದು ಆತ ಹೇಳಿದ್ದಾನೆ. “ಆರು ವರ್ಷಗಳ ಹಿಂದೆ, ಈ ಸಂಘಟನೆಯು ತಪ್ಪು ಹಾದಿಯಲ್ಲಿದೆ ಮತ್ತು ಅವರ ಬೋಧನೆಗಳು ದೇಶ ವಿರೋಧಿ ಎಂದು ನಾನು ಅರಿತುಕೊಂಡೆ. ನಾನು ಹಲವಾರು ಬಾರಿ ಅದನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ್ದೆ. ಆದಾಗ್ಯೂ, ಅವರು ಅದನ್ನು ಮಾಡಲು ಎಂದಿಗೂ ಸಿದ್ಧರಿರಲಿಲ್ಲ ಎಂದು ಆತ ಹೇಳಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ಕೇರಳದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್ ಭಾನುವಾರ ಮೂರು ಸರಣಿ ಸ್ಫೋಟಗಳಿಗೆ ಸಾಕ್ಷಿಯಾಯಿತು, ಘಟನೆಯಲ್ಲಿ ಮೂವರು ಸಾವಿಗೀಡಾದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡರು.
ಆರಂಭದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದರು. ತರುವಾಯ, ನಂತರ ತೀವ್ರವಾಗಿ ಗಾಯಗೊಂಡ 53 ವರ್ಷದ ಮಹಿಳೆ, ಹಾಗೂ ಸೋಮವಾರ ಬೆಳಗ್ಗೆ ನಡೆದ ಘಟನೆಯಲ್ಲಿ ಶೇ.95ರಷ್ಟು ಸುಟ್ಟ ಗಾಯಗಳಾಗಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದರಿಂದ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement