ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್ಗಾಗಿ ಜಾರಿ ನಿರ್ದೇಶನಾಲಯ (ಇಡಿ) ಲುಕ್ಔಟ್ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಶಹಜಹಾನ್ ಶೇಖ್ ಅವರ ಮನೆ ಮೇಲೆ ದಾಳಿ ಮಾಡಲು ಹೊರಟಿದ್ದ ಇ.ಡಿ. ತಂಡದ ಮೇಲೆ ನೂರಾರು ಜನ ಶಹಜಹಾನ್ ಶೇಖ್ ಬೆಂಬಲಿಗರು ದಾಳಿ ಮಾಡಿ ಹಲ್ಲೆ ನಡೆಸಿದ ಒಂದು ದಿನದ ನಂತರ ಈ ಸೂಚನೆ ಬಂದಿದೆ.
“ಸಾವನ್ನು ಉಂಟು ಮಾಡುವ ಉದ್ದೇಶದಿಂದ” ಸುಮಾರು ಸಾವಿರ ಜನರ ಗುಂಪು ತಮ್ಮ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ ಎಂದು ಇ.ಡಿ. ಶುಕ್ರವಾರ ಹೇಳಿದೆ.
ತನಿಖಾ ಸಂಸ್ಥೆಯ ಅಧಿಕಾರಿಗಳು ಸಂದೇಶಖಾಲಿಯಲ್ಲಿರುವ ಅವರ ನಿವಾಸಕ್ಕೆ ತೆರಳುತ್ತಿದ್ದಾಗ ಶೇಖ್ ಬೆಂಬಲಿಗರು ಗುಂಪೊಂದು ದಾಳಿ ನಡೆಸಿದೆ. ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಟಿಎಂಸಿ ನಾಯಕನ ಮನೆ ಮೇಲೆ ಶೋಧ ಕಾರ್ಯಾಚರಣೆ ನಡೆಸಲು ತೆರಳಿದ ಸಂದರ್ಭದಲ್ಲಿ ಇ.ಡಿ.ಅಧಿಕಾರಿಗಳು ಹಾಗೂ ಅವರ ವಾಹನದ ಮೇಲೆ ಗುಂಪು ದಾಳಿ ನಡೆಸಿತ್ತು.
ಹೇಳಿಕೆಯಲ್ಲಿ, ಕೇಂದ್ರ ತನಿಖಾ ಸಂಸ್ಥೆಯು ಗುಂಪು ಅಧಿಕಾರಿಗಳಿಂದ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಹಣವನ್ನು ಕಸಿದುಕೊಂಡು ಹೋಗಿದೆ ಎಂದು ಹೇಳಿದೆ.
ಇ.ಡಿ.(ED) ಸೂಚನೆಯನ್ನು ಎಲ್ಲಾ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಗಡಿ ಭದ್ರತಾ ಪಡೆ (BSF)ಯೊಂದೊಗೆ ಹಂಚಿಕೊಳ್ಳಲಾಗಿದೆ. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಶೇಖ್ ಅವರ ನಿವಾಸದ ಬಳಿ ಇಡಿ ಅಧಿಕಾರಿಗಳು ಶೋಧ ಕಾರಾಚರಣೆಗೆ ತೆರಳಿದ ನಂತರ ಪರಾರಿಯಾಗಿದ್ದಾರೆ.
ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಶಹಜಹಾನ್ ಶೇಖ್ಗಾಗಿ ಜಾರಿ ನಿರ್ದೇಶನಾಲಯ (ಇಡಿ) ಲುಕ್ಔಟ್ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಶಹಜಹಾನ್ ಶೇಖ್ ಅವರ ಮನೆ ಮೇಲೆ ದಾಳಿ ಮಾಡಲು ಹೊರಟಿದ್ದ ಇ.ಡಿ. ತಂಡದ ಮೇಲೆ ನೂರಾರು ಜನ ಶಹಜಹಾನ್ ಶೇಖ್ ಬೆಂಬಲಿಗರು ದಾಳಿ ಮಾಡಿ ಹಲ್ಲೆ ನಡೆಸಿದ ಒಂದು ದಿನದ ನಂತರ ಈ ಸೂಚನೆ ಬಂದಿದೆ.
“ಸಾವನ್ನು ಉಂಟು ಮಾಡುವ ಉದ್ದೇಶದಿಂದ” ಸುಮಾರು ಸಾವಿರ ಜನರ ಗುಂಪು ತಮ್ಮ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ ಎಂದು ಇ.ಡಿ. ಶುಕ್ರವಾರ ಹೇಳಿದೆ.
ತನಿಖಾ ಸಂಸ್ಥೆಯ ಅಧಿಕಾರಿಗಳು ಸಂದೇಶಖಾಲಿಯಲ್ಲಿರುವ ಅವರ ನಿವಾಸಕ್ಕೆ ತೆರಳುತ್ತಿದ್ದಾಗ ಶೇಖ್ ಬೆಂಬಲಿಗರು ಗುಂಪೊಂದು ದಾಳಿ ನಡೆಸಿದೆ. ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಟಿಎಂಸಿ ನಾಯಕನ ಮನೆ ಮೇಲೆ ಶೋಧ ಕಾರ್ಯಾಚರಣೆ ನಡೆಸಲು ತೆರಳಿದ ಸಂದರ್ಭದಲ್ಲಿ ಇ.ಡಿ.ಅಧಿಕಾರಿಗಳು ಹಾಗೂ ಅವರ ವಾಹನದ ಮೇಲೆ ಗುಂಪು ದಾಳಿ ನಡೆಸಿತ್ತು.
ಹೇಳಿಕೆಯಲ್ಲಿ, ಕೇಂದ್ರ ತನಿಖಾ ಸಂಸ್ಥೆಯು ಗುಂಪು ಅಧಿಕಾರಿಗಳಿಂದ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಹಣವನ್ನು ಕಸಿದುಕೊಂಡು ಹೋಗಿದೆ ಎಂದು ಹೇಳಿದೆ.
ಇ.ಡಿ.(ED) ಸೂಚನೆಯನ್ನು ಎಲ್ಲಾ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಗಡಿ ಭದ್ರತಾ ಪಡೆ (BSF)ಯೊಂದೊಗೆ ಹಂಚಿಕೊಳ್ಳಲಾಗಿದೆ. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಶೇಖ್ ಅವರ ನಿವಾಸದ ಬಳಿ ಇಡಿ ಅಧಿಕಾರಿಗಳು ಶೋಧ ಕಾರಾಚರಣೆಗೆ ತೆರಳಿದ ನಂತರ ಪರಾರಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಈವರೆಗೆ, ಮೂರು ಎಫ್ಐಆರ್ಗಳು ದಾಖಲಾಗಿದೆ. ಎಲ್ಲಾ ಆರೋಪಿಗಳ ವಿರುದ್ಧ ಇ.ಡಿ. ಎಫ್ಐಆರ್ ದಾಖಲಿಸಲಾಗಿದೆ, ಇಡೀ ಘಟನೆಯ ಕುರಿತು ಪಶ್ಚಿಮ ಬಂಗಾಳ ಪೊಲೀಸರು ಮತ್ತೊಂದು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಮೂರನೆಯದು ಟಿಎಂಸಿ ನಾಯಕ ಶೇಖ್ ಷಹಜಹಾನ್ ಅವರ ಮನೆಯ ಉಸ್ತುವಾರಿ ಅನುಮತಿಯಿಲ್ಲದೆ “ಬಂದು ಬೀಗ ಮುರಿದ” ಇ.ಡಿ. ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ