ರಾಜ್ಯದ 39 ಸಂಘಟನಾ ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಿದ ಬಿಜೆಪಿ : ಯಾವ ಜಿಲ್ಲೆಗೆ ಯಾರು..? ಪಟ್ಟಿ ಇಲ್ಲಿದೆ..

ಬೆಂಗಳೂರು : ರಾಜ್ಯ ಬಿಜೆಪಿ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ರಾಜ್ಯದ ಒಟ್ಟು 39 ಸಂಘಟನಾ ಜಿಲ್ಲೆಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇಮಕ ಮಾಡಿ  ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ಅವರನ್ನು ನೇಮಕ ಮಾಡಲಾಗಿದ್ದು, ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿಯಾಗಿ ಬಿ.ಎಚ್. ವಿಶ್ವನಾಥ ಅವರು ನೇಮಕಗೊಂಡಿದ್ದಾರೆ.
ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ ಹಾಗೂ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅದೇ ರೀತಿ, ಮೂವರು ಮಾಜಿ ಶಾಸಕರಾದ ಎಲ್. ನಾಗೇಂದ್ರ, ಸಿ.ಎಸ್. ನಿರಂಜನಕುಮಾರ ಮತ್ತು ಅರುಣಕುಮಾರ ಪೂಜಾರ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪಟ್ಟಿ…
ಮೈಸೂರು ನಗರ- ಎಲ್. ನಾಗೇಂದ್ರ
ಮೈಸೂರು ಗ್ರಾಮಾಂತರ- ಎಲ್.ಆರ್. ಮಹದೇವಸ್ವಾಮಿ
ಚಾಮರಾಜನಗರ- ಸಿ.ಎಸ್. ನಿರಂಜನಕುಮಾರ
ಮಂಡ್ಯ- ಇಂದ್ರೇಶಕುಮಾರ
ಹಾಸನ- ಸಿದ್ದೇಶ ನಾಗೇಂದ್ರ
ಕೊಡಗು- ರವಿ ಕಾಳಪ್ಪ
ದಕ್ಷಿಣ ಕನ್ನಡ- ಸತೀಶ ಕುಂಪಲ
ಉಡುಪಿ- ಕಿಶೋರ ಕುಂದಾಪುರ
ಚಿಕ್ಕಮಗಳೂರು- ದೇವರಾಜ ಶೆಟ್ಟಿ
ಶಿವಮೊಗ್ಗ- ಟಿ.ಡಿ. ಮೇಘರಾಜ
ಉತ್ತರ ಕನ್ನಡ- ಎನ್.ಎಸ್. ಹೆಗಡೆ
ಹಾವೇರಿ- ಅರುಣಕುಮಾರ್ ಪೂಜಾರ
ಹುಬ್ಬಳ್ಳಿ- ಧಾರವಾಡ : ತಿಪ್ಪಣ್ಣ ಮಜ್ಜಗಿ
ಧಾರವಾಡ ಗ್ರಾಮಾಂತರ- ನಿಂಗಪ್ಪ ಸುತ್ತಗಟ್ಟಿ
ಗದಗ- ರಾಜು ಕುರಡಗಿ

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

ಬೆಳಗಾವಿ ನಗರ- ಗೀತಾ ಸುತಾರ
ಬೆಳಗಾವಿ ಗ್ರಾಮಾಂತರ- ಸುಭಾಷ್ ಪಾಟೀಲ
ಚಿಕ್ಕೋಡಿ- ಸತೀಶ ಅಪ್ಪಾಜಿಗೋಳ
ಬಾಗಲಕೋಟೆ- ಶಾಂತಗೌಡ ಪಾಟೀಲ
ವಿಜಯಪುರ- ಆರ್.ಎಸ್. ಪಾಟೀಲ
ಬೀದರ್- ಸೋಮನಾಥ‌ ಪಾಟೀಲ
ಕಲಬುರ್ಗಿ ನಗರ- ಚಂದ್ರಕಾಂತ ಪಾಟೀಲ
ಕಲಬುರ್ಗಿ ಗ್ರಾಮಾಂತರ- ಶಿವರಾಜ ಪಾಟೀಲ ರದ್ದೇವಾಡಿ
ಯಾದಗಿರಿ- ಅಮೀನ್ ರೆಡ್ಡಿ
ರಾಯಚೂರು- ಡಾ. ಶಿವರಾಜ ಪಾಟೀಲ
ಕೊಪ್ಪಳ- ನವೀನ ಗುಳಗಣ್ಣನವರ್
ಬಳ್ಳಾರಿ- ಅನಿಲಕುಮಾರ ಮೋಕಾ
ವಿಜಯನಗರ- ಚನ್ನಬಸವನಗೌಡ ಪಾಟೀಲ
ದಾವಣಗೆರೆ- ರಾಜಶೇಖರ
ಚಿತ್ರದುರ್ಗ- ಎ. ಮುರಳಿ
ತುಮಕೂರು – ಹೆಚ್.ಎಸ್. ರವಿಶಂಕರ
ಮಧುಗಿರಿ- ಬಿ.ಸಿ. ಹನುಮಂತೇಗೌಡ
ರಾಮನಗರ- ಆನಂದಸ್ವಾಮಿ
ಬೆಂಗಳೂರು ಗ್ರಾಮಾಂತರ- ರಾಮಕೃಷ್ಣಪ್ಪ
ಚಿಕ್ಕಬಳ್ಳಾಪುರ-ರಾಮಲಿಂಗಪ್ಪ
ಕೋಲಾರ- ಡಾ. ಕೆ.ಎನ್. ವೇಣುಗೋಪಾಲ
ಬೆಂಗಳೂರು ಉತ್ತರ- ಎಸ್. ಹರೀಶ್
ಬೆಂಗಳೂರು ಕೇಂದ್ರ- ಸಪ್ತಗಿರಿಗೌಡ
ಬೆಂಗಳೂರು ದಕ್ಷಿಣ- ಸಿ.ಕೆ. ರಾಮಮೂರ್ತಿ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement