ಅಯೋಧ್ಯೆ: ಶ್ರೀರಾಮಲಲ್ಲಾ ವಿಗ್ರಹ ಗರ್ಭಗುಡಿಯೊಳಗೆ ಪ್ರವೇಶ

ಅಯೋಧ್ಯಾ: ಜನವರಿ 22 ರಂದು ನಡೆಯುವ ರಾಮ ಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದ ಪೂರ್ವಭಾವಿ ಕಾರ್ಯಕ್ರಮಗಳು ನಡೆಯುತ್ತಿವೆ, ಬುಧವಾರ ಸಾಯಂಕಾಲ 51 ಇಂಚು ಎತ್ತರದ ರಾಮಲಲ್ಲಾನ ಹೊಸ ವಿಗ್ರಹವನ್ನು ರಾಮಮಂದಿರ ಆವರಣಕ್ಕೆ ತರಲಾಯಿತು.
ಮೈಸೂರು ಮೂಲದ ಶಿಲ್ಪಿ ಅರುಣ ಯೋಗಿರಾಜ ಕೆತ್ತಿರುವ ನೂತನ ವಿಗ್ರಹವನ್ನು ಗುರುವಾರ ದೇವಾಲಯದ ಗರ್ಭಗೃಹದಲ್ಲಿ ಇರಿಸಲಾಗುವುದು ಎಂದು ಶ್ರೀ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

‘ಕೃಷ್ಣ ಶಿಲಾ’ (ಕಪ್ಪು ಕಲ್ಲು) ಮೇಲೆ ಕೆತ್ತಲಾದ ನೂತನ ವಿಗ್ರಹವನ್ನು ಕರಸೇವಕಪುರಂ ಬಳಿಯ ಕಾರ್ಯಾಗಾರದಿಂದ ಲಾರಿಯಲ್ಲಿ ದೇವಸ್ಥಾನದ ಆವರಣಕ್ಕೆ ತರಲಾಯಿತು. ಸುಮಾರು 150ರಿಂದ 200 ಕೆಜಿ ತೂಕದ ವಿಗ್ರಹವನ್ನು ದೇವಾಲಯದ ಒಳಗೆ ಸ್ಥಳಾಂತರಿಸಲು ಕ್ರೇನ್ ಬಳಸಲಾಯಿತು. ಹೊಸ ವಿಗ್ರಹದ ಆಗಮನದ ಮೊದಲು, ಟ್ರಸ್ಟ್ ಸದಸ್ಯರು ಮತ್ತು ಪ್ರಮುಖರಾದ ಅನಿಲ ಮಿಶ್ರಾ ಎರಡನೇ ದಿನ ಧಾರ್ಮಿಕ ವಿಧಿಗಳನ್ನು ನಡೆಸಿದರು.

ಬುಧವಾರ ಮಧ್ಯಾಹ್ನ 1:20 ರ ಸುಮಾರಿಗೆ ಜಲ ಯಾತ್ರೆಯೊಂದಿಗೆ ಆಚರಣೆಗಳು ಪ್ರಾರಂಭವಾದವು, ನಂತರ ತೀರ್ಥಪೂಜೆಯು ದೇವಾಲಯದ ಸ್ಥಳದಲ್ಲಿ ಹವನವನ್ನು ಮಾಡಲಾಯಿತು.
121 ‘ಆಚಾರ್ಯರು’ ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದಾರೆ. ಅದಕ್ಕೂ ಹಿಂದಿನ ದಿನ, ಸುಮಾರು 500 ಮಹಿಳೆಯರು ಸರಯೂ ಘಾಟ್‌ನಿಂದ ರಾಮ ಮಂದಿರದವರೆಗೆ “ಜಲ ಕಲಶ ಯಾತ್ರೆ” ಯಲ್ಲಿ ಪಾಲ್ಗೊಂಡರು, ಸರಯೂ ನದಿಯಿಂದ ನೀರನ್ನು ತಮ್ಮ ಕಲಶದಲ್ಲಿ ಸಾಗಿಸಿದರು. ಅವರಲ್ಲಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬೃಜೇಶ ಪಾಠಕ ಅವರ ಪತ್ನಿ ನಮ್ರತಾ ಪಾಠಕ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement