ವೀಡಿಯೊ..| ಪಾರ್ಕಿಂಗ್‌ ವಿಷಯಕ್ಕೆ ರೆಸ್ಟೋರೆಂಟ್ ಮಾಲೀಕನ ಮೇಲೆ ಹಲ್ಲೆ ನಡೆಸಿದ ಟಿಎಂಸಿ ಶಾಸಕ…

ಕೋಲ್ಕತ್ತಾ: ಸಿನಿಮಾವೊಂದರ ಚಿತ್ರೀಕರಣದ ವೇಳೆ ರೆಸ್ಟೊರೆಂಟ್ ಮಾಲೀಕನ ಮೇಲೆ ನಟ-ತೃಣಮೂಲ ಕಾಂಗ್ರೆಸ್ ಶಾಸಕ ಸೋಹಮ್ ಚಕ್ರವರ್ತಿ ಹಲ್ಲೆ ನಡೆಸಿ ವಿವಾದ ಸೃಷ್ಟಿಸಿದ್ದಾರೆ.
ಚಕ್ರವರ್ತಿ ಮತ್ತು ರೆಸ್ಟೋರೆಂಟ್ ಮಾಲೀಕ ಅನಿಸುಲ್ ಆಲಂ ಇಬ್ಬರೂ ಪರಸ್ಪರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ನಂತರ ಶಾಸಕರು ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಏಕೆಂದರೆ ತಾನು ತನ್ನ ಕೋಪವನ್ನು ನಿಯಂತ್ರಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಕೋಲ್ಕತ್ತಾ ಬಳಿಯ ನ್ಯೂ ಟೌನ್‌ನಲ್ಲಿರುವ ಉಪಾಹಾರ ಗೃಹದ ಮುಂದೆ ಚಕ್ರವರ್ತಿ ಮತ್ತು ಅವರ ಬೆಂಬಲಿಗರು ಕಾರುಗಳನ್ನು ನಿಲ್ಲಿಸುವ ಬಗ್ಗೆ ವಾದ ನಡೆಯಿತು. ರೆಸ್ಟೋರೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಶಾಸಕ ಚಕ್ರವರ್ತಿ ಅವರು ಆಲಂ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.

ರೆಸ್ಟೋರೆಂಟ್ ಮಾಲೀಕರು ಶನಿವಾರ ಸಂಜೆ ತನ್ನ ರೆಸ್ಟೋರೆಂಟ್‌ನ ಒಂದು ಭಾಗದಲ್ಲಿ “ಉಚಿತವಾಗಿ” ಚಿತ್ರೀಕರಣಕ್ಕೆ ಅವಕಾಶ ನೀಡಿರುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. “ಇಡೀ ಪಾರ್ಕಿಂಗ್ ಸ್ಥಳವನ್ನು ಚಕ್ರವರ್ತಿ ಮತ್ತು ಅವರ ಸಿಬ್ಬಂದಿ ಆಕ್ರಮಿಸಿಕೊಂಡಿದ್ದರು. ಇತರ ಗ್ರಾಹಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಸಾಧ್ಯವಾಗದ ಕಾರಣ ಅವರ ಕಾರುಗಳನ್ನು ಅಲ್ಲಿಂದ ತೆಗೆಯುವಂತೆ ನನ್ನ ಸಿಬ್ಬಂದಿ ಅವರ ಸಿಬ್ಬಂದಿಗೆ ಹೇಳಿದರು” ಎಂದು ಆಲಂ ಹೇಳಿದ್ದಾರೆ.
ಅವರು ಎಂಎಲ್ಎ ಮತ್ತು ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಅತ್ಯಂತ ಆತ್ಮೀಯ ಸ್ನೇಹಿತ ಎಂದು ನಟನ ಬೆಂಬಲಿಗರು ಹೇಳಿದರು ಎಂದು ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ. “ಅವರು ನರೇಂದ್ರ ಮೋದಿಯವರ ಸ್ನೇಹಿತರಾಗಲಿ ಅಥವಾ ಅಭಿಷೇಕ್ ಸ್ನೇಹಿತರಾಗಲಿ ನಾನು ಹೆದರುವುದಿಲ್ಲ ಎಂದು ನಾನು ಹೇಳಿದೆ. ಆಗ ಇದ್ದಕ್ಕಿದ್ದಂತೆ ಶಾಸಕ ಚಕ್ರವರ್ತಿ ಬಂದು ನನ್ನ ಮುಖಕ್ಕೆ ಹೊಡೆದರು ಮತ್ತು ನನ್ನ ಹೊಟ್ಟೆಗೆ ಒದ್ದರು” ಎಂದು ಆಲಂ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   T20 ವಿಶ್ವಕಪ್ 2024 : ಪ್ರಶಸ್ತಿ ಗೆದ್ದ ಭಾರತಕ್ಕೆ ಸಿಕ್ಕ ಟಿ20 ವಿಶ್ವಕಪ್ ಬಹುಮಾನದ ಮೊತ್ತ..ವಿವಿಧ ವಿಭಾಗದಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

ರೆಸ್ಟೋರೆಂಟ್ ಮಾಲೀಕರಿಗೆ ಕಪಾಳಮೋಕ್ಷ ಮಾಡಿದ್ದನ್ನು ಟಿಎಂಸಿ ಶಾಸಕ ಚಕ್ರವರ್ತಿ ಒಪ್ಪಿಕೊಂಡಿದ್ದಾರೆ. “ರೆಸ್ಟೋರೆಂಟ್ ಮಾಲೀಕರು ಹಾಗೂ ಅವರ ಸಿಬ್ಬಂದಿ ಅಭಿಷೇಕ್ ಬ್ಯಾನರ್ಜಿಯನ್ನು ನಿಂದಿಸುತ್ತಿದ್ದರು. ಅವರು ನನ್ನನ್ನೂ ನಿಂದಿಸಿದರು. ನಾನು ತಾಳ್ಮೆ ಕಳೆದುಕೊಂಡೆ ಮತ್ತು ಆತನಿಗೆ ಕಪಾಳಮೋಕ್ಷ ಮಾಡಿದ್ದೇನೆ … ನಾನು ನನ್ನ ಕೋಪವನ್ನು ನಿಯಂತ್ರಿಸಬೇಕಾಗಿತ್ತು ಮತ್ತು ನನ್ನ ಕೋಪವನ್ನು ನಿಯಂತ್ರಿಸಬಹುದಿತ್ತು. ನಾನು ಮಾಲೀಕರಲ್ಲಿ ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ನಟ-ಶಾಸಕ ಸೋಹಂ ಚಕ್ರವರ್ತಿ ಹೇಳಿದರು.
ಶಾಸಕರು ಮತ್ತು ಅವರ ಭದ್ರತಾ ಸಿಬ್ಬಂದಿ ವಿರುದ್ಧ ರೆಸ್ಟೋರೆಂಟ್ ಮಾಲೀಕರು ಶನಿವಾರ ದೂರು ನೀಡಿದ್ದಾರೆ ಎಂದು ಬಿಧಾನನಗರ ಪೊಲೀಸ್ ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಾವು ಪರಸ್ಪರರ ವಿರುದ್ಧ ಶಾಸಕರು ಮತ್ತು ರೆಸ್ಟೋರೆಂಟ್ ಮಾಲೀಕರಿಂದ ದೂರುಗಳನ್ನು ಸ್ವೀಕರಿಸಿದ್ದೇವೆ. ನಾವು ಪ್ರಕರಣಗಳನ್ನು ಪ್ರಾರಂಭಿಸಿದ್ದೇವೆ ಮತ್ತು ತನಿಖೆ ನಡೆಸುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು

ಪ್ರಮುಖ ಸುದ್ದಿ :-   ಬಾಲಿವುಡ್‌ ಹಿರಿಯ ನಟ-ಸಂಸದ ಶತ್ರುಘ್ನ ಸಿನ್ಹಾ ಆಸ್ಪತ್ರೆಗೆ ದಾಖಲು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement