ಬೆಂಗಳೂರು : ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಭಾರತೀಯ ಹವಾಮಾನ ಇಲಾಖೆ (IMD) ಜೂನ್ 29 ರವರೆಗೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ ೩೦ರ ವರೆಗೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ.
ಗಾಳಿಯ ವೇಗ ತಾಸಿಗೆ ಸರಾಸರಿ 35-45ಕಿಮೀ ವರೆಗೆ ಬೀಸುವ ಸಾಧ್ಯತೆಯಿದೆ. ಅದು ಕೆಲವೊಮ್ಮೆ 55 ಕಿಮೀಗೂ ತಲುಪಬಹುದು ಎಂದು ಅದು ಹೇಳಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಪ್ರವೇಶಿಸುವುದನ್ನು ತಡೆಯಲು IMD ಬಲವಾಗಿ ಸಲಹೆ ನೀಡಿದೆ
ಇದು ದಕ್ಷಿಣ ಕನ್ನಡ (ಮುಲ್ಕಿಯಿಂದ ಮಂಗಳೂರು) ಉಡುಪಿ (ಬೈಂದೂರಿನಿಂದ ಕಾಪು) ಮತ್ತು ಉತ್ತರ ಕನ್ನಡ (ಮಾಜಾಳಿಯಿಂದ ಭಟ್ಕಳ) ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಹೆಚ್ಚಿನ ಅಲೆಗಳ ಎಚ್ಚರಿಕೆಯನ್ನು ನೀಡಿದೆ. ಜೂನ್ 29 ರವರೆಗೆ 2.9 ಮೀಟರ್ನಿಂದ ನಿಂದ 3.7 ಮೀಟರ್ ವರೆಗೆ ಎತ್ತರದ ಅಲೆಗಳು ಏಳುವ ಕಾರಣ ಸಮುದ್ರ ಕಾರ್ಯಾಚರಣೆಗಳು ಮತ್ತು ಸಮೀಪದ ಸಮುದ್ರ ದಡಕ್ಕೆ ಹೋಗುವವರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.
.
ತಗ್ಗು ಪ್ರದೇಶಗಳ ಜಲಾವೃತಗೊಳ್ಳುವ ಹಾಗೂ ಮಣ್ಣು ಕುಸಿದು ಬಂಡೆಗಳು ಬೀಳುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಸಿದೆ. ಅದು, ಹಠಾತ್ ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬೇಕು ಎಂದು ಅದು ಹೇಳಿದೆ.
ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಅತಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ, ಶನಿವಾರ (ಜೂನ್ 29) ತಾಪಮಾನವು 26.4 ಡಿಗ್ರಿ ಸೆಲ್ಸಿಯಸ್ನಿಂದ 21.3 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಜೂನ್ 27 ರಂದು ಆಗುಂಬೆಯಲ್ಲಿ ಅತಿ ಹೆಚ್ಚು ಅಂದರೆ 81.5 ಮಿಮೀ ಮತ್ತು ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಅಂದರೆ 0.1 ಮಿಮೀ ಮಳೆಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಒಳಹರಿವು ಕಂಡುಬಂದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಾರ, ಜೂನ್ 28 ಕ್ಕೆ ಕಬಿನಿಗೆ ನೀರಿನ ಒಳಹರಿವು 20,113 ಕ್ಯೂಸೆಕ್ ಗೆ ಏರಿಕೆ ಕಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ