ನಿಮ್ಮನ್ನು ಕೋರ್ಟ್ ನಿಂದ ಹೊರಗೆ ಕಳಿಸಬೇಕಾಗ್ತದೆ ; ಹಿರಿಯ ವಕೀಲರ ಮೇಲೆ ಗರಂ ಆದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ನವದೆಹಲಿ: ಮಂಗಳವಾರ ನಡೆದ ನೀಟ್‌ ಯುಜಿ (NEET-UG) ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರು ಸುಪ್ರೀಂ ಕೋರ್ಟ್‌ನಲ್ಲಿರುವ ಭದ್ರತಾ ಸಿಬ್ಬಂದಿಗೆ ಹಿರಿಯ ವಕೀಲರನ್ನು ನ್ಯಾಯಾಲಯದಿಂದ ಹೊರಗೆ ಕಳುಹಿಸುವಂತೆ ಆದೇಶ ನೀಡಿದರು. ನ್ಯಾಯಮೂರ್ತಿಗಳು ಕಠೋರವಾಗಿ ಎಚ್ಚರಿಸಿದ ನಂತರ ವಕೀಲರು ಸ್ವಯಂಪ್ರೇರಿತರಾಗಿ ನ್ಯಾಯಾಲಯದಿಂದ ಹೊರನಡೆದರು.
ನೀಟ್-ಯುಜಿ ವಿಚಾರಣೆ ವೇಳೆ ಮತ್ತೊಬ್ಬ ಮತ್ತೊಬ್ಬ ವಕೀಲರ ವಾದ ಮಂಡನೆಗೆ ಅಡ್ಡಿಪಡಿಸಿದ್ದಕ್ಕಾಗಿ ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪಾರ ಅವರನ್ನು ಸಿಜೆಐ ಟೀಕಿಸಿದರು. ಈ ಪ್ರಕರಣದಲ್ಲಿ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ನರೇಂದ್ರ ಹೂಡಾ ಅವರಿಗೆ ಅಡ್ಡಿಪಡಿಸದಂತೆ ನೆಡುಂಪಾರ ಅವರಿಗೆ ನ್ಯಾಯಮೂರ್ತಿ ಚಂದ್ರಚೂಡ ಅವರು ಕೇಳಿಕೊಂಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಹೂಡಾ ಅವರು ವಾದಿಸುತ್ತಿದ್ದಾಗ ತನಗೆ ಏನನ್ನೋ ಹೇಳಬೇಕಾಗಿದೆ ಎಂದು ನೆಡುಂಪಾರ ಮಧ್ಯಪ್ರವೇಶಿಸಿದರು. ಹೂಡಾ ಅವರು ತಮ್ಮ ವಾದವನ್ನು ಪೂರ್ಣಗೊಳಿಸಿದ ನಂತರ ಮಾತನಾಡುವಂತೆ ಸಿಜೆಐ ಅವರಿಗೆ ಸಲಹೆ ನೀಡಿದರು. ಸಿಜೆಐ ನಿರ್ದೇಶನಕ್ಕೆ ಪ್ರತಿಕ್ರಿಯಿಸಿದ ನೆಡುಂಪಾರ ಅವರು ತಾನು ನ್ಯಾಯಾಲಯದಲ್ಲಿ ಅತ್ಯಂತ ಹಿರಿಯ ವಕೀಲ ಎಂದು ಹೇಳಿದ್ದಾರೆ. ವಕೀಲರ ವರ್ತನೆಯಿಂದ ಅಸಮಾಧಾನಗೊಂಡ ಸಿಜೆಐ ಎಚ್ಚರಿಕೆ ನೀಡಿದರು.ಇದು ಕೋರ್ಟ್, ಇಲ್ಲಿ ಉತ್ತಮ ರೀತಿಯಲ್ಲಿ ನಡೆದುಕೊಳ್ಳಿ ಎಂದು ಹೇಳಿದರು. . ತಾನು ನ್ಯಾಯಾಲಯದ ಉಸ್ತುವಾರಿ ಎಂದು ವಕೀಲರಿಗೆ ನೆನಪಿಸಿದರು.

ಪ್ರಮುಖ ಸುದ್ದಿ :-   ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ...!

ಹೇಳಿದಾಗಲೂ ವಕೀಲರು ಪಾಲಿಸಲಿಲ್ಲ ಎಂದು ಸಿಟ್ಟುಗೊಂಡ ಸಿಜೆಐ, ಸೆಕ್ಯುರಿಟಿಯನ್ನು ಕರೆಯಿರಿ, ಅವರನ್ನು ಹೊರ ಕಳುಹಿಸಿ ಎಂದಿದ್ದಾರೆ. ಇದಕ್ಕೆ ವಕೀಲರು, ಹೊರ ಹೋಗಲು ನನಗೆ ಹೇಳಬೇಕಾಗಿಲ್ಲ ಎಂದಿದ್ದಾರೆ.
“ನೀವು ಹಾಗೆ ಹೇಳಬೇಕಾಗಿಲ್ಲ. ನೀವು ಹೊರಡಬಹುದು. ನಾನು ಕಳೆದ 24 ವರ್ಷಗಳಿಂದ ನ್ಯಾಯಾಂಗವನ್ನು ನೋಡಿದ್ದೇನೆ. ಈ ನ್ಯಾಯಾಲಯದಲ್ಲಿ ಕಾರ್ಯವಿಧಾನವನ್ನು ನಿರ್ದೇಶಿಸಲು ವಕೀಲರಿಗೆ ನಾನು ಅವಕಾಶ ನೀಡುವುದಿಲ್ಲ ಎಂದು ಸಿಜೆಐ ಹೇಳಿದರು. ನಾನು 1979 ರಿಂದ ನ್ಯಾಯಾಂಗವನ್ನು ನೋಡಿರುವೆ ಎಂದು ಹೇಳಿ ನೆಡುಂಪಾರ ಕೋರ್ಟ್ ರೂಂನಿಂದ ಹೊರ ನಡೆದಿದ್ದಾರೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement