ಯಲ್ಲಾಪುರ : ಅತಿಕ್ರಮಣದಾರರಿಗೆ ಸಂಸದ ಕಾಗೇರಿ ಭರವಸೆ

ಯಲ್ಲಾಪುರ : ಈಗಾಗಲೇ ಅತಿಕ್ರಮಣ ಆಗಿರುವ ಜಾಗದಿಂದ ಯಾರನ್ನೂ ಕದಲಿಸಲು ಬಿಡುವುದಿಲ್ಲ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅತಿಕ್ರಮಣದಾರರಿಗೆ ಭರವಸೆ ನೀಡಿದ್ದಾರೆ.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಅತಿಕ್ರಮಣದಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮ ಹಕ್ಕಿಗೆ ತೊಂದರೆಯಾಗದ ಹಾಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಹೊಸದಾಗಿ ಏನೂ ಮಾಡಲು ಹೋಗುವುದು ಬೇಡ. ಮಂಜೂರಾತಿ ಪ್ರಕ್ರಿಯೆಗೆ ಬೇಕಾದ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವನವಾಸಿ ಕಲ್ಯಾಣದ ದೋಂಡು ಪಾಟೀಲ ಮಾಹಿತಿ ನೀಡಿ, ಅರಣ್ಯ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು. ಅಗತ್ಯ ಮತ್ತು‌ ಪ್ರಮುಖ ದಾಖಲೆಗಳನ್ನು ನೀಡಿದರೂ ಅರ್ಜಿ ತಿರಸ್ಕರಿಸಲಾಗುತ್ತಿದೆ. ಜಿಪಿಎಸ್ ಗೆ ಈಗಲೂ ಅವಕಾಶವಿದೆ. ಆದರೆ ಅರಣ್ಯ ಇಲಾಖೆಯವರು ಅತಿಕ್ರಮಣದಾರರಿಗೆ ತಪ್ಪು ಮಾಹಿತಿ ನೀಡುತ್ತಾರೆ ಎಂದು ಆರೋಪಿಸಿದರು.

ಮಲವಳ್ಳಿಯ ರಸ್ಮಾ ಕುಣಬಿ ಮಾತನಾಡಿ ಜಿಪಿಎಸ್ ಆದ ಜಾಗವನ್ನು ಮಂಜೂರಿ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ನೂರಾರು ಅತಿಕ್ರಮಣದಾರರು‌ ಸಂಸದರಿಗೆ ಮನವಿ‌ ನೀಡಿ ಭೂಮಿ ಮಜೂರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲವಳ್ಳಿಯ ದೀಪಕ ಭಟ್ಟ, ಸುಬ್ಬಣ್ಣ ಬೋಳ್ಮನೆ, ರಸ್ಮಾ ಕುಣಬಿ, ಶಂಕರ ಗಾಂವ್ಕಾರ್ ಸಂಸದ ಕಾಗೇರಿಯವರನ್ನು ಅಭಿನಂದಿಸಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ಪ್ರಮೋದ ಹೆಗಡೆ, ಉಮೇಶ ಭಾಗ್ವತ ಕಳಚೆ, ಪ್ರಸಾದ ಹೆಗಡೆ, ಗಣಪತಿ ಬೋಳಗುಡ್ಡೆ, ರಾಘವ ಭಟ್ಟ, ರವಿ ಕೈಟಕರ್, ನಟರಾಜ ಗೌಡರ್, ಚಂದ್ರಕಲಾ ಭಟ್ಟ, ವಿಶ್ವೇಶ್ವರ ಏಕಾನ್, ಕೆ.ಟಿ.ಹೆಗಡೆ, ಗೋಪಾಲಕೃಷ್ಣ ಎನ್. ಗಾಂವ್ಕಾರ್, ವೆಂಕಟ್ರಮಣ ಬೆಳ್ಳಿ, ಗಣಪತಿ ಮುದ್ದೆಪಾಲ್ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement