ಹುಬ್ಬಳ್ಳಿ: ಕರ್ನಾಟಕ ಸಾಮರಸ್ಯ ವೇದಿಕೆ, ಅರಿವು, ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಸೇರಿದಂತೆ ಇತರ ಸಂಘಟನೆಗಳ ಸಹಯೋಗದಲ್ಲಿ ಆಗಸ್ಟ್ ೭ ರಂದು ಸಂಜೆ ೬ಕ್ಕೆ ವಚನ ದರ್ಶನ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಸ್ಥಳೀಯ ಸವಾಯಿ ಗಂಧರ್ವ ಹಾಲ್ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರದ ಪ್ರಾಂತ ಕಾರ್ಯವಾಹರಾದ ರಾಘವೇಂದ್ರ ಕಾಗವಾಡ ಅವರು ಆಶಯ ಭಾಷಣ ಮಾಡಲಿದ್ದಾರೆ. ಉದ್ಯಮಿಗಳು ಹಾಗೂ ಕೆಎಲ್ಇ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ ಗೌರವ ಉಪಸ್ಥಿತಿ ಇರಲಿದೆ. ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸ್ಥಳೀಯ, ತಾಲೂಕು ಹಾಗೂ ಜಿಲ್ಲೆ ಅಲ್ಲದೇ ರಾಜ್ಯಮಟ್ಟದ ಸುಮಾರು ೩೦ ಸಂಘಟನೆಗಳು ಸಹಯೋಗ ನೀಡಿದೆ. ವಚನ ದರ್ಶನ ಗ್ರಂಥ ವಿಶೇಷ ಕೃತಿಯಾಗಿದ್ದು, ವಚನಗಳನ್ನು ನೆಲದ ಸಂಸ್ಕೃತಿಯಲ್ಲಿ ತಿಳಿಯುವ ನಿಟ್ಟಿನಲ್ಲಿ ಚರ್ಚಿಸುತ್ತದೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಮತ್ತು ಅಭಿಮಾನಿಗಳು ಅಲ್ಲದೆ ಆಸಕ್ತರು ಆಗಮಿಸಬೇಕು ಎಂದು ಸಾಮರಸ್ಯ ವೇದಿಕೆಯ ಸಂಯೋಜಕರಾದ ಈರಣ್ಣ ಶಿರಸಂಗಿ ಅರಿವು ಸಂಘಟನೆಯ ಸಂಯೋಜಕರಾದ ಶರದ್ ದೇಶಪಾಂಡೆ, ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸು. ಪ್ರಾ. ಕುಂದರಗಿ ಕೋರಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ