ಬೆಳಗಾವಿ : ಡಾ.ಸೋನಾಲಿ ಸರ್ನೋಬತ್ ಅವರು ತಮ್ಮ ರಾಜಮಾತಾ ಜಿಜೌ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಭಾನುವಾರ (ಆಗಸ್ಟ್ 25) ಬೆಳಿಗ್ಗೆ 9 ರಿಂದ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ವಧುವರ ಸಮ್ಮೇಳನ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಮಾತಾ ಜಿಜೌ ಸಾಂಸ್ಕೃತಿಕ ಪ್ರತಿಷ್ಠಾನವು ಮರಾಠಾ ಸಮುದಾಯಕ್ಕಾಗಿ ಶೀಘ್ರದಲ್ಲೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ಹೇಳಿದರು.
ಜಿಜೌ ಬ್ರಿಗೇಡ್ ಎಲ್ಲ ಸಂದರ್ಭಗಳಲ್ಲಿಯೂ, ಯಾವುದೇ ಸಮಸ್ಯೆ ಬಂದಾಗಲೂ ಸಮುದಾಯದ ಎಲ್ಲಾ ಮಹಿಳೆಯರ ಪರವಾಗಿ ನಿಲ್ಲುತ್ತದೆ. ಮರಾಠಾ ಸಮಾಜವನ್ನು ಬಲಿಷ್ಠಗೊಳಿಸಬೇಕಾಗಿದೆ ಎಂದರು.
ಬೆಂಗಳೂರಿನ ಗವಿಪುರ ಗೋಸಾಯಿಮಠದ ಶ್ರೀ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ ಹಾಗೂ ಕದ್ರೊಳಿ ಮಠದ ಶ್ರೀ ಗುರುಪುತ್ರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸ್ವಾಮೀಜಿಗಳು ರಾಜಮಾತೆ ಜೀಜಾವು ಫೋಟೋಕ್ಕೆ ಪೂಜೆ ನೆರವೇರಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಮಂಜುನಾಥ ಸ್ವಾಮೀಜಿ ಮಾತನಾಡಿ, ಡಾ. ಸೋನಾಲಿ ಸರ್ನೋಬತ್ ಅವರ ಸಾಮಾಜಿಕ ನೆರವಿನ ಪ್ರಯತ್ನ ಶ್ಲಾಘನೀಯ ಮತ್ತು ಅವರ ತಂಡವು ಉತ್ತಮ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು. ಹಿಂದೂ ಧರ್ಮ ಮತ್ತು ಹಿಂದೂ ಸನಾತನ ಧರ್ಮವನ್ನು ಎತ್ತಿ ಹಿಡಿಯುವಲ್ಲಿ ಮತ್ತು ರಕ್ಷಿಸುವಲ್ಲಿ ಮರಾಠಾ ಸಮುದಾಯದ ಕೊಡುಗೆಯ ಬಗ್ಗೆ ಮಾತನಾಡಿದರು.
ಡಾ.ಸೋನಾಲಿ ಇಬ್ಬರೂ ಗಣ್ಯರಿಗೆ ಶಾಲು ಹೊದಿಸಿ, ಫಲ ನೀಡಿ ಗೌರವಿಸಿದರು. 300 ವಧು-ವರ ಅನ್ವೇಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೀಪಾಲಿ ಮಾಲಕಾರಿ ನಿರೂಪಿಸಿದರು. ಗೀತಾಂಜಲಿ ಚೌಗುಲೆ, ನಮ್ರತಾ ಹುಂದಾರೆ, ಕಾಂಚನ್ ಚೌಗುಲೆ, ಆಶಾರಾಣಿ ನಿಂಬಾಳ್ಕರ್, ವೃಶಾಲಿ ಮೋರೆ, ಲಕ್ಷ್ಮೀ ಗೌಂಡಾಡ್ಕರ, ವಿದ್ಯಾ ಸರ್ನೋಬತ್, ಚಂದ್ರ ಚೋಪಡೆ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.
ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ಸದಸ್ಯರಾದ ದಿಲೀಪ ಪವಾರ, ಸತೀಶ ಬಾಚಿಕರ್, ರೋಹನ್ ಕದಂ, ಡಿ.ಬಿ.ಪಾಟೀಲ, ಸಂಜಯ ಭೋಸಲೆ ಬೆಂಬಲ ನೀಡಿದರು.
ನಿಮ್ಮ ಕಾಮೆಂಟ್ ಬರೆಯಿರಿ