ʼಎಮರ್ಜೆನ್ಸಿʼ ಸಿನೆಮಾ ಬಿಡುಗಡೆಗೂ ಮುನ್ನ ನಟಿ-ಸಂಸದೆಗೆ ಕಂಗನಾ ರಣಾವತಗೆ ಕೊಲೆ ಬೆದರಿಕೆ

ನವದೆಹಲಿ: ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಿರುವ ತಮ್ಮ ಮುಂದಿನ ಚಿತ್ರ ‘ಎಮರ್ಜೆನ್ಸಿ’ ಬಿಡುಗಡೆಗೆ ಮುನ್ನ ಕೆಲವರಿಂದ ಕೊಲೆ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಈ ಬೆದರಿಕೆಗಳು ಬಂದಿವೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಿಜೆಪಿ ಸಂಸದರಾಗಿರುವ ನಟಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರ ಸಹಾಯವನ್ನು ಕೋರಿದ್ದಾರೆ.
“ಸಿನಿಮಾದಲ್ಲಿ ಆತನನ್ನು (ಖಾಲಿಸ್ತಾನಿ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ) ಭಯೋತ್ಪಾದಕನಂತೆ ಬಿಂಬಿಸಿದ್ದರೆ, ನೀವು ಯಾರ ಸಿನಿಮಾ ಮಾಡುತ್ತಿದ್ದೀರಿಯೋ ಆ ವ್ಯಕ್ತಿಗೆ (ಇಂದಿರಾ ಗಾಂಧಿ) ಏನಾಯಿತು ಎಂಬುದನ್ನು ನೆನಪಿಸಿಕೊಳ್ಳಿ” ಎಂದು ವಿಕ್ಕಿ ಥಾಮಸ್ ಸಿಂಗ್ ಎಂದು ಗುರುತಿಸಲ್ಪಟ್ಟಿರುವ ವ್ಯಕ್ತಿ ಎಚ್ಚರಿಸಿದ್ದಾನೆ.

ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಯಾರು? ನಾವು ನಮ್ಮ ತಲೆಯನ್ನು ಅರ್ಪಿಸುತ್ತೇವೆ. ಸಂತ್ಜಿ, ಮತ್ತು ತಲೆಯನ್ನು ಅರ್ಪಿಸಬಲ್ಲವರು ಅದನ್ನು ಸಹ ಕತ್ತರಿಸಬಹುದು, ”ಎಂದು ವ್ಯಕ್ತಿ ವೀಡಿಯೊದಲ್ಲಿ ಹೇಳಿದ್ದಾನೆ. ವಿಕ್ಕಿ ಥಾಮಸ್ ಸಿಂಗ್ X ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ನಿಯಮಿತವಾಗಿ ಭಿಂದ್ರನ್‌ವಾಲೆಯನ್ನು ಶ್ಲಾಘಿಸುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಾನೆ ಎಂದು ಹೇಳಲಾಗಿದೆ.
ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರು ಇಂದಿರಾ ಗಾಂಧಿಯವರ ಇಬ್ಬರು ಅಂಗರಕ್ಷಕರಾಗಿದ್ದರು, ಅವರು ಅಕ್ಟೋಬರ್ 31, 1984 ರಂದು ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದರು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

X ನಲ್ಲಿ ವಿಕ್ಕಿ ಥಾಮಸ್ ಸಿಂಗ್ ಬೆದರಿಕೆ ವೀಡಿಯೊ ಹಂಚಿಕೊಂಡ ರಣಾವತ್ ಅವರು ಪೊಲೀಸರ ನೆರವು ಕೋರಿದ್ದಾರೆ. “ದಯವಿಟ್ಟು ಇದನ್ನು ನೋಡಿ” ಎಂದು ಅವರು ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಬರೆದು ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಸಿಖ್ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಹಲವಾರು ಸಿಖ್ ಸಂಘಟನೆಗಳು ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿರುವ ಚಲನಚಿತ್ರವನ್ನು ನಿಷೇಧಿಸುವಂತೆ ಕರೆ ನೀಡಿವೆ. ಇಡೀ ಸಿಖ್ ಸಮುದಾಯವನ್ನು ಪ್ರತ್ಯೇಕತಾವಾದಿಗಳೆಂದು ಬಿಂಬಿಸುವುದು ತಪ್ಪು ಎಂದು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement