ಕೆರೆಗೆ ಬಿದ್ದ ಮಗನ ರಕ್ಷಿಸಲು ಹೋಗಿ ತಾಯಿಯೂ ನೀರುಪಾಲು

ರಾಯಚೂರು: ಬಟ್ಟೆ ತೊಳೆಯಲು ಕೆರೆಗೆ ಹೋಗಿದ್ದ ವೇಳೆ ತಾಯಿ-ಮಗ ನೀರು ಪಾಲಾದ ಘಟನೆ ರಾಯಚೂರಿನ ಮಲಿಯಾಬಾದ್‌ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಾಲು ಜಾರಿ ಕೆರೆಗೆ ಬಿದ್ದ ಮಗನನ್ನು ರಕ್ಷಿಸಲು ಹೋಗಿ ಮಗನ ಜೊತೆಗೆ ತಾಯಿಯೂ ನೀರುಪಾಲಾಗಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ರಾಧಮ್ಮ (32) ಹಾಗೂ ಮಗ ಸಂಜು (5) ಎಂದು ಗುರುತಿಸಲಾಗಿದೆ. ರಾಧಮ್ಮ ಬಟ್ಟೆ ತೊಳೆಯಲೆದು ಕೆರೆಗೆ ಹೋಗಿದ್ದರು. ತಾಯಿ ಸಂಗಡ ಬಾಲಕ ಸಂಜು ಕೂಡ ಹೋಗಿದ್ದ. ಈ ವೇಳೆ ಸಂಜು ಆಕಾಸ್ಮಾತ್‌ ಆಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಕೆರೆಗೆ ಇಳಿದ ರಾಧಮ್ಮ ಕೂಡ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

4 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ನಿಮ್ಮ ಕಾಮೆಂಟ್ ಬರೆಯಿರಿ

advertisement