ನವದೆಹಲಿ : ಕಾಂಗ್ರೆಸ್ ಪಕ್ಷವು ಪ್ರಮುಖ ಪ್ರಮುಖ ಪದಾಧಿಕಾರಿಗಳ ಪುನರ್ರಚನೆಗೆ ಮುಂದಾಗಿದ್ದು, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸದಾಗಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಕ್ಷದ ಸಂಘಟನೆಯ ಪುನರ್ ರಚನೆ ಪ್ರಕ್ರಿಯೆಗೆ ಪಕ್ಷ ಚಾಲನೆ ನೀಡಿದೆ. ಹಲವು ರಾಜ್ಯಗಳ ಉಸ್ತುವಾರಿ ಬದಲಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದು, ಕರ್ನಾಟಕದ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖಿನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಕರ್ನಾಟಕದ ಹರಿಯಾಣದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ದೀಪಕ ಬಬಾರಿಯಾ ಅವರ ಬದಲಿಗೆ ಬಿ ಕೆ ಹರಿಪ್ರಸಾದ ಅವರನ್ನು ನೇಮಿಸಲಾಗಿದೆ. ಗಿರಿ ಚೋಡಂಕರ್ ಅವರನ್ನು ತಮಿಳುನಾಡು ಮತ್ತು ಪುದುಚೇರಿಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ. ಅಹರಿಪ್ರಸಾದ ಅವರು ಹಲವಾರು ವರ್ಷಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿದ್ದರು. ಹಾಗೂ ಹಲವು ರಾಜ್ಯಗಳ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಮೂರು ವರ್ಷಗಳ ಹಿಂದೆ ರಾಜ್ಯ ರಾಜಕಾರಣಕ್ಕೆ ಬಂದಿದ್ದರು. ಈಗ ಪುನಃ ಅವರು ರಾಷ್ಟ್ರ ರಾಜಕಾರಣಕ್ಕೆ ಮರಳಿದಂತಾಗಿದೆ.
ಮಧ್ಯಪ್ರದೇಶದ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ತೆಲಂಗಾಣದ ನೂತನ ಉಸ್ತುವಾರಿಯಾಗಿದ್ದಾರೆ. ಅವರು ಡಿಸೆಂಬರ್ 2023 ರಿಂದ ತೆಲಂಗಾಣದ ಹೆಚ್ಚುವರಿ ಉಸ್ತುವಾರಿ ಹೊತ್ತಿದ್ದ ದೀಪಾ ದಾಸ್ಮುನ್ಶಿ ಅವರ ಬದಲಿಗೆ ಮೀನಾಕ್ಷಿ ನಟರಾಜನ್ ಅವರನ್ನು ನೇಮಿಸಲಾಗಿದೆ. ದೀಪಾ ದಾಸ್ಮುನ್ಶಿ ಅವರು ಕೇರಳ ಮತ್ತು ಲಕ್ಷದ್ವೀಪಗಳಿಗೆ ಎಐಸಿಸಿ ಉಸ್ತುವಾರಿಯಾಗಿ ಮುಂದುವರಿಯುತ್ತಾರೆ.
ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಅವರನ್ನು ಪಂಜಾಬ್ನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಹರೀಶ ಚೌಧರಿ ಬದಲಿಗೆ ಬಾಘೇಲ್ ಅವರನ್ನು ನೇಮಿಸಲಾಗಿದೆ. ಹರೀಶ ಚೌಧರಿ ಮಧ್ಯಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ರಾಜ್ಯಸಭಾ ಸದಸ್ಯೆ ರಜನಿ ಪಾಟೀಲ ಅವರನ್ನು ಹಿಮಾಚಲ ಪ್ರದೇಶ ಮತ್ತು ಚಂಡೀಗಢಕ್ಕೆ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಈ ಮೊದಲು ಹಿರಿಯ ನಾಯಕ ರಾಜೀವ ಶುಕ್ಲಾ ಅವರಿಗೆ ಈ ಜವಾನ್ದಾರಿ ನೀಡಲಾಗಿತ್ತು. ರಜನಿ ಪಾಟೀಲ ಅವರು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ.
ಜಯಕುಮಾರ ಲಲ್ಲು ಅವರನ್ನು ಒಡಿಶಾ ಮತ್ತು ಕೆ.ರಾಜು ಅವರನ್ನು ಜಾರ್ಖಂಡಕ್ಕೆ ಉಸ್ತುವಾರಿಯಾಗಿ ನೇಮಿಸಲಾಗಿದೆ. ಮಣಿಪುರ, ತ್ರಿಪುರ, ಸಿಕ್ಕಿಂ ಮತ್ತು ನಾಗಾಲ್ಯಾಂಡ್ನಲ್ಲಿ ಕಾಂಗ್ರೆಸ್ ವ್ಯವಹಾರಗಳನ್ನು ಸಪತಗಿರಿ ಶಂಕರ ಉಲಕ ನೋಡಿಕೊಳ್ಳುತ್ತಾರೆ. ಕೃಷ್ಣ ಅಳ್ಳವರು ಬಿಹಾರದ ನೂತನ ಉಸ್ತುವಾರಿಯಾಗಿದ್ದಾರೆ. ನಿರ್ಗಮಿಸುವ ಪ್ರಧಾನ ಕಾರ್ಯದರ್ಶಿಗಳು/ಪ್ರಭಾರಿಗಳೆಂದರೆ ದೀಪಕ ಬಾಬ್ರಿಯಾ, ಮೋಹನ ಪ್ರಕಾಶ, ಭರತ ಸಿಂಗ್ ಸೋಲಂಕಿ, ರಾಜೀವ ಶುಕ್ಲಾ, ಅಜೋಯಕುಮಾಯ ಮತ್ತು ದೇವೇಂದ್ರ ಯಾದವ್ ಆಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ