ಹಿಂದಿ ಹೇರಿಕೆ ಗದ್ದಲ | ನಟಿ ರಂಜನಾ ನಾಚ್ಚಿಯಾರ್ ಬಿಜೆಪಿಗೆ ರಾಜೀನಾಮೆ ; ನಟ ವಿಜಯ ಟಿವಿಕೆ ಪಕ್ಷಕ್ಕೆ ಸೇರ್ಪಡೆ

ಚೆನ್ನೈ: ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ಬದಲಾವಣೆಯಲ್ಲಿ, ನಟಿ-ರಾಜಕಾರಣಿ ರಂಜನಾ ನಾಚಿಯಾರ್ ಅವರು ಮಂಗಳವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ್ದಾರೆ. ಹಿಂದಿ ಹೇರಿಕೆ ವಿಚಾರ ಮತ್ತು ತಮಿಳುನಾಡಿನ ಹಿತಾಸಕ್ತಿಗಳ ನಿರ್ಲಕ್ಷ್ಯ ಸೇರಿದಂತೆ ಬಿಜೆಪಿ ನೀತಿಗಳ ಬಗ್ಗೆ ಅಸಮಾಧಾನವನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ ಒಂದು ದಿನದ ನಂತರ, ಅವರು ಅಧಿಕೃತವಾಗಿ ತಮಿಳು ನಟ ವಿಜಯ ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (TVK) ಸೇರಿದ್ದಾರೆ. ನಟ ವಿಯ ಅವರನ್ನು ಅವರನ್ನು “ಮುಂದಿನ ಎಂಜಿಆರ್‌ (MGR) ಎಂದು ಬಣ್ಣಿಸಿದ್ದಾರೆ.
ಬಿಜೆಪಿಯ ಕಲೆ ಮತ್ತು ಸಂಸ್ಕೃತಿ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ನಟಿ ರಂಜನಾ ನಾಚಿಯಾರ್ ಎಂಟು ವರ್ಷಗಳಿಂದ ಬಿಜೆಪಿಯಲ್ಲಿದ್ದರು. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಬಿಜೆಪಿಯು ತಮಿಳುನಾಡಿನ ವಿಶಿಷ್ಟ ಸಾಂಸ್ಕೃತಿಕ ಮತ್ತು ಭಾಷಿಕ ಗುರುತನ್ನು ಗುರುತಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

“ತಮಿಳು ಮಹಿಳೆಯಾಗಿ, ತ್ರಿಭಾಷಾ ನೀತಿಯ ಹೇರಿಕೆ, ತಮಿಳುನಾಡಿನ ಆಕಾಂಕ್ಷೆಗಳ ನಿರಂತರ ನಿರ್ಲಕ್ಷ್ಯವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲಬಿಜೆಪಿಯ ಕೇಂದ್ರೀಕರಣ ನೀತಿಗಳು ರಾಜ್ಯದ ಅನನ್ಯ ಪರಂಪರೆಯನ್ನು ನಾಶಪಡಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಬುಧವಾರ ಚೆನ್ನೈ ಬಳಿ ನಡೆದ ತಮಿಳಗ ವೆಟ್ರಿ ಕಳಗಂ (TVK) ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಂಜನಾ ನಾಚಿಯಾರ್ ಅವರು ನಟ ವಿಜಯ ಅವರ ನಾಯಕತ್ವವನ್ನು ಶ್ಲಾಘಿಸಿದರು, ಅವರ ರಾಷ್ಟ್ರೀಯತೆ ಮತ್ತು ದ್ರಾವಿಡ ತತ್ವಗಳ ಮಿಶ್ರಣದ ನಿಲುವಿನಿಂದಾಗಿ ಟಿವಿಕೆ ಪಕ್ಷವು ತಮ್ಮ ಭವಿಷ್ಯಕ್ಕಾಗಿ ಆದರ್ಶ ರಾಜಕೀಯ ವೇದಿಕೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, “ವಿಜಯ ತಮಿಳುನಾಡಿಗೆ ದೊಡ್ಡ ಭರವಸೆ” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಛತ್ತೀಸ್‌ಗಡದಲ್ಲಿ 3 ತಿಂಗಳ ಪಡಿತರ ಒಂದೇ ಬಾರಿಗೆ ವಿತರಣೆ ; ಗೇಟ್‌ ಮುರಿದು ಒಳ ನುಗ್ಗಿದ ಜನ ಸಮೂಹ...!

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement