ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾ ವಿಶೇಷ ವಿಮಾನದಲ್ಲಿ ಇಂದು ಭಾರತಕ್ಕೆ ; ತಿಹಾರ್ ಜೈಲಿನಲ್ಲಿ ಇರಿಸುವ ಸಾಧ್ಯತೆ

ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾ ಇಂದು, ಗುರುವಾರ ಮಧ್ಯಾಹ್ನದ ನಂತರ ಭಾರತಕ್ಕೆ ತಲುಪಲಿದ್ದಾರೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಭಾರತಕ್ಕೆ ತಲುಪಿದಾಗ ತಿಹಾರ್ ಜೈಲಿನಲ್ಲಿರುವ ಹೆಚ್ಚಿನ ಭದ್ರತೆಯ ವಾರ್ಡ್‌ನಲ್ಲಿ ಇರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆತನ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ರಾಣಾ ಗಡೀಪಾರು ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನ ವಿಫಲವಾಗಿದೆ. ಇದರ ನಂತರ ಆತನನ್ನು ಭಾರತಕ್ಕೆ ಕರೆತರಲಾಗುತ್ತಿದೆ.
ತಹವ್ವೂರ್ ಹುಸೇನ್ ರಾಣಾನನ್ನು ಹೊತ್ತ ವಿಶೇಷ ವಿಮಾನವು ಬುಧವಾರ ಭಾರತದ ಸಮಯ ಸಂಜೆ 7:10ರ ಸುಮಾರಿಗೆ ಅಮೆರಿಕದಿಂದ ಹೊರಟಿತು ಮತ್ತು ಗುರವಾರ ಮಧ್ಯಾಹ್ನದ ನಂತರ ಭಾರತದಲ್ಲಿ ಇಳಿಯುವ ನಿರೀಕ್ಷೆಯಿದೆ.

ರಾಣಾ ದೆಹಲಿಗೆ ಬಂದಿಳಿದ ನಂತರ, ಆತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕೃತವಾಗಿ ಬಂಧಿಸುತ್ತದೆ ಮತ್ತು ತಿಹಾರ್ ಜೈಲಿನಲ್ಲಿ ಇರಿಸಲಾಗುತ್ತದೆ, ಅಲ್ಲಿ ಅವರ ವಾಸ್ತವ್ಯಕ್ಕಾಗಿ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ರಾಣಾ ಅವರ ಗಡೀಪಾರು ದೃಷ್ಟಿಯಿಂದ ಕೇಂದ್ರ ಕಾರಾಗೃಹದ ಸುತ್ತಲೂ ಹೆಚ್ಚಿನ ಭದ್ರತೆಯನ್ನು ಏರ್ಪಡಿಸಲಾಗಿದೆ.
ತಹವ್ವೂರ್ ರಾಣಾ ಅವರನ್ನು ಪಾಲಂ ತಾಂತ್ರಿಕ ವಿಮಾನ ನಿಲ್ದಾಣದಿಂದ ಎನ್‌ಐಎ (NIA) ಪ್ರಧಾನ ಕಚೇರಿಗೆ ಗುಂಡು ನಿರೋಧಕ ವಾಹನದಲ್ಲಿ ಕರೆತರಲಾಗುತ್ತದೆ. ಮೂಲಗಳ ಪ್ರಕಾರ, ಗುಂಡು ನಿರೋಧಕ ಕಾರಿನ ಜೊತೆಗೆ ಮಾರ್ಕ್ಸ್‌ಮನ್ ವಾಹನವನ್ನು ಸಹ ಸಜ್ಜಾಗಿ ಇರಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ಕೋಶದ ಕಮಾಂಡೋಗಳು ಈ ವಾಹನದೊಂದಿಗೆ ಸಿದ್ಧವಾಗಿ ನಿಂತಿದ್ದಾರೆ. ಮಾರ್ಕ್ಸ್‌ಮನ್ ವಾಹನವು ಅತ್ಯಂತ ಸುರಕ್ಷಿತ ವಾಹನವಾಗಿದ್ದು, ಎಲ್ಲ ರೀತಿಯ ದಾಳಿಗೆ ನಿರೋಧಕವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಇರಾನ್ ಮೇಲೆ ದಾಳಿ ಮಾಡಿ ವಾಪಸ್‌ ಆಗುತ್ತಿರುವ ಬಿ -2 ಬಾಂಬರ್‌ ವೀಡಿಯೊ ಹಂಚಿಕೊಂಡ ಅಮೆರಿಕ

ದೆಹಲಿಯ ವಿಶೇಷ ಕೋಶವು ಈ ವಾಹನವನ್ನು ಉನ್ನತ ಮಟ್ಟದ ಭಯೋತ್ಪಾದಕರು ಮತ್ತು ಗ್ಯಾಂಗ್‌ಸ್ಟರ್‌ ಗಳನ್ನು ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಯ ಕಚೇರಿಗಳಿಗೆ ಸಾಗಿಸಲು ಬಳಸುತ್ತದೆ.
ಭಾರತಕ್ಕೆ ಬಂದ ನಂತರ, ಭಯೋತ್ಪಾದಕ ದಾಳಿಯ ಮಾಸ್ಟರ್‌ಮೈಂಡ್ ದೆಹಲಿಯ ವಿಶೇಷ ಎನ್‌ಐಎ (NIA ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗುತ್ತಾನೆ. ಪ್ರಕರಣವು ಈಗ ದೆಹಲಿಯಲ್ಲಿ ವಿಚಾರಣೆಯಾಗುವುದರಿಂದ, ಅವರನ್ನು ಮುಂಬೈಗೆ ಕಳುಹಿಸಲಾಗುವುದಿಲ್ಲ. ತಹವ್ವೂರ್ ರಾಣಾ ಅವರನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದು, ಅಲ್ಲಿ ಎನ್‌ಐಎ (NIA) ನ್ಯಾಯಾಧೀಶರು ಈ ವಿಷಯವನ್ನು ಆಲಿಸುವ ನಿರೀಕ್ಷೆಯಿದೆ.
26/11 ಮುಂಬೈ ದಾಳಿ ಆರೋಪಿ ತಹವ್ವೂರ್ ಹುಸೇನ್ ರಾಣಾ ವಿರುದ್ಧದ ಪ್ರಕರಣದಲ್ಲಿ ಎನ್‌ಐಎ (NIA) ಪ್ರತಿನಿಧಿಸುವ ಪ್ರಾಸಿಕ್ಯೂಷನ್ ತಂಡದ ಮುಖ್ಯಸ್ಥರಾಗಿ ಹಿರಿಯ ಕ್ರಿಮಿನಲ್ ವಕೀಲ ದಯಾನ್ ಕೃಷ್ಣನ್ ಅವರನ್ನು ನೇಮಿಸುವ ಸಾಧ್ಯತೆಯಿದೆ. ಅವರೊಂದಿಗೆ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ನರೇಂದ್ರ ಮಾನ್ ಕಾನೂನು ಪ್ರಕ್ರಿಯೆಗಳನ್ನು ಮುನ್ನಡೆಸಲಿದ್ದಾರೆ.

ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ರಾಣಾ (64)ನನ್ನು ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅವರ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಗಡೀಪಾರು ತಪ್ಪಿಸಿಕೊಳ್ಳುವ ಕೊನೆಯ ಪ್ರಯತ್ನ ವಿಫಲವಾದ ನಂತರ ರಾಣಾ ಅವರನ್ನು ಭಾರತಕ್ಕೆ ಕರೆತರಲಾಗುತ್ತಿದೆ.
ನವೆಂಬರ್ 26, 2008 ರಂದು, 10 ಪಾಕಿಸ್ತಾನಿ ಭಯೋತ್ಪಾದಕರ ಗುಂಪು ಅರೇಬಿಯನ್ ಸಮುದ್ರದಲ್ಲಿ ಸಮುದ್ರ ಮಾರ್ಗವನ್ನು ಬಳಸಿಕೊಂಡು ಮುಂಬೈಗೆ ನುಸುಳಿದ ನಂತರ, ರೈಲ್ವೆ ನಿಲ್ದಾಣ, ತಾಜ್‌ ಹೋಟೆಲ್‌ ಸೇರಿದಂತೆ ಎರಡು ಐಷಾರಾಮಿ ಹೋಟೆಲ್‌ಗಳು ಮತ್ತು ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿತು. ದಾಳಿಯಲ್ಲಿ 166 ಜನರು ಸಾವಿಗೀಡಾದರು. ನವೆಂಬರ್ 2012 ರಲ್ಲಿ, ಪಾಕಿಸ್ತಾನಿ ಭಯೋತ್ಪಾದಕ ಗುಂಪಿನ ಏಕೈಕ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್‌ನನ್ನು ಪುಣೆಯ ಯೆರವಾಡ ​​ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement