ಪರಾರಿಯಾಗುತ್ತಿದ್ದ ಕೊಲೆ ಆರೋಪಿ ಹಿಡಿಯಲು ಕಾರಿನ ಬಾಗಿಲಿಗೆ ನೇತಾಡಿ ತಡೆಯಲು ಯತ್ನಿಸಿದ ಪೊಲೀಸ್‌ ಅಧಿಕಾರಿ; ವೀಡಿಯೊ ವೈರಲ್‌

ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ತಿರುಪತಿ ಹೆದ್ದಾರಿಯಲ್ಲಿ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯನ್ನು ಬಂಧಿಸಲು ಪೊಲೀಸ್‌ ಅಧಿಕಾರಿಯೊಬ್ಬರು ಚಲಿಸುತ್ತಿದ್ದ ಕಾರಿನ ಬಾಗಿಲೆಗೆ ಜೋತುಬಿದ್ದು ಆತನನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಸಾಹಸದ ವೀಡಿಯೊ ವೈರಲ್‌ ಆಗಿದೆ.
ವ್ಯಕ್ತಿಯೊಬ್ಬರು ಈ ವೀಡಿಯೊ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಆರೋಪಿ ವ್ಯಕ್ತಿ ಅಲಗುರಾಜ ಎಂಬಾತ ಮಾಯಿಲೈ ಶಿವಕುಮಾರ ಎಂಬ ವ್ಯಕ್ತಿಯ ಕೊಲೆ ಸೇರಿದಂತೆ ಹಲವಾರು ಅಪರಾಧಗಳಿಗೆ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿ ಎಂದು ಮೂಲಗಳು ತಿಳಿಸಿವೆ.

ಐಸ್ ಹೌಸ್ ಮತ್ತು ಜಾಮ್ ಬಜಾರ್ ಪೊಲೀಸ್ ಠಾಣೆಗಳಲ್ಲಿ ಅಲಗುರಾಜ ವಿರುದ್ಧ ಹಲವಾರು ಪ್ರಕರಣಗಳು ಬಾಕಿ ಇವೆ ಎಂದು ವರದಿಯಾಗಿದೆ. ಅಲಗುರಾಜ ತಿರುವಲ್ಲೂರು ಜಿಲ್ಲೆಯಲ್ಲಿ ಅಡಗಿಕೊಂಡಿದ್ದಾನೆ ಎಂಬ ಸುಳಿವು ದೊರೆತ ನಂತರ, ಪೊಲೀಸರು ಅವನನ್ನು ಹಿಡಿಯಲು ವಿಶೇಷ ತಂಡಗಳನ್ನು ರಚಿಸಿದರು. ಪೊಲೀಸ್‌ ತಂಡಗಳು ಹುಡುಕಲು ಬರುತ್ತಿದ್ದಂತೆಯೇ, ಅಲಗುರಾಜ ಕಾರಿನಲ್ಲಿ ಹೆದ್ದಾರಿ ಮೂಲಕ ಪರಾರಿಯಾಗಲು ಪ್ರಯತ್ನಿಸಿದ್ದಾನೆ.

ಜಾಮ್ ಬಜಾರ್ ಸಬ್ ಇನ್ಸ್‌ಪೆಕ್ಟರ್ ಆನಂದಕುಮಾರ ಅವರು ವಾಹನದ ಮೇಲೆ ಕಾರಿನ ಮೇಲೆ ಹಾರಿ ಅದರ ಬಾಗಲಿ ಹಿಡಿದುಕೊಂಡು ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ವೇಗವಾಗಿ ಸಾಗುತ್ತಿದ್ದ ಕಾರಿನ ಬಾಗಿಲು ಹಿಡಿದುಕೊಂಡು ವಾಹನವನ್ನು ತಡೆಯಲು ಪ್ರಯತ್ನಿಸಿದರು. ವಾಹನದಲ್ಲಿದ್ದವರು ಅಂತಿಮವಾಗಿ ಅವರನ್ನು ತಳ್ಳಿದರು. ಆ ಸಮಯದಲ್ಲಿ ಕೆಳಗೆ ಬಿದ್ದ ಹೆಲ್ಮೆಟ್ ಧರಿಸಿದ್ದ ಆನಂದಕುಮಾರ ಗಂಭೀರ ಗಾಯದಿಂದ ಪಾರಾದರೂ, ಚಿಕಿತ್ಸೆಗಾಗಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲಗುರಾಜ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪರಾರಿಯಾಗಿದ್ದಾನೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ.

ಪ್ರಮುಖ ಸುದ್ದಿ :-   ರತನ್ ಟಾಟಾಗೆ ಹೆಮ್ಮೆ ತಂದ ತಮ್ಮ...! ಭಾರತದ ನಂ.1 ಮೌಲ್ಯಯುತ ಬ್ರ್ಯಾಂಡ್ ಆದ ಟಾಟಾ ಗ್ರುಪ್‌ ; ಬ್ರ್ಯಾಂಡ್ ಮೌಲ್ಯ ಎಷ್ಟು ಗೊತ್ತೆ...?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement