ಮನಗೂಳಿ ಕೆನರಾ ಬ್ಯಾಂಕ್​ ದರೋಡೆ ಪ್ರಕರಣ ಭೇದಿಸಿದ ಪೊಲೀಸರು : ಅದೇ ಬ್ಯಾಂಕಿನಲ್ಲಿ ಮ್ಯಾನೇಜರ್​ ಆಗಿದ್ದವನೇ ಮಾಸ್ಟರ್‌ ಮೈಂಡ್‌; ಮೂವರ ಬಂಧನ

ವಿಜಯಪುರ: ಕಳೆದ ತಿಂಗಳು ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್​ನಲ್ಲಿ ನಡೆದಿದ್ದ 53.26 ಕೋಟಿ ರೂ. ಮೌಲ್ಯದ ಬಂಗಾರ ಹಾಗೂ ನಗದು ದರೋಡೆ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ.
ಮೇ 25 ರಂದು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್​ನ ಲಾಕರ್​ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿಬಂಗಾರದ ಆಭರಣಗಳು ಹಾಗೂ 5,20,450 ರೂ. ನಗದು ದರೋಡೆಯಾಗಿತ್ತು. ಪ್ರಕರಣದ ಹಿಂದೆ ಬಿದ್ದ ಪೊಲೀಸರು ಕೊನೆಗೂ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದು, ಇದರ ಮಾಸ್ಟರ್‌ ಮೈಂಡ್‌  ಇದೇ ಕೆನರಾ ಬ್ಯಾಂಕ್‌ನ ಮ್ಯಾನೇಜರ್ ಆಗಿದ್ದ ವಿಜಯಕುಮಾರ ಮಿರಿಯಾಲ, ಹುಬ್ಬಳ್ಳಿಯ ಖಾಸಗಿ ಕಂಪೆನಿ ಉದ್ಯೋಗಿ ಚಂದ್ರಶೇಖರ​ ನೆರೆಲ್ಲಾ, ಸುನೀಲ ಮೋಕಾ ಎಂಬವರನ್ನು ಬಂಧಿಸಿದ್ದಾರೆ.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು, “ಬಂಧಿತ ಆರೋಪಿಗಳು ಹುಬ್ಬಳ್ಳಿಯವರು. ಇವರು ವ್ಯವಸ್ಥಿತವಾಗಿ ಒಳಸಂಚು ಮಾಡಿ ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣಗಳನ್ನು ಹಾಗೂ ನಗದು ದೋಚಿದ್ದರು, ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದರೂ ಪ್ರಕರಣವನ್ನು ಭೇದಿಸಲಾಗಿದೆ ಎಂದು ತಿಳಿಸಿದರು.
“ಆರೋಪಿಗಳು ಬ್ಯಾಂಕ್​ನ ಕಿಟಕಿ ಕತ್ತರಿಸಿ ಒಳಗೆ ನುಗ್ಗಿ, ಸೇಫ್ ಲಾಕರ್ ರೂಮ್​ನ ಗ್ರಿಲ್ ಮುರಿದು ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಈ ಕೃತ್ಯಕ್ಕೆ ಬಳಸಿದ 2 ಕಾರುಗಳು ಹಾಗೂ ಅಂದಾಜು 10.75 ಕೋಟಿ ರೂ. ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣವನ್ನು ಕರಗಿಸಿದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಗಣೆಗೆ ಸುಲಭವಾಗುತ್ತದೆ ಎಂದು ಕದ್ದ ಚಿನ್ನವನ್ನು ಕರಗಿಸಿದ್ದರು. ಉಳಿದ ಆರೋಪಿಗಳು ಹಾಗೂ ಕಳುವಾದ ವಸ್ತುಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಮಲೆ ಮಹದೇಶ್ವರ ಬೆಟ್ಟದ ಒಂದೇ ಸ್ಥಳದಲ್ಲಿ ತಾಯಿ, 4 ಮರಿ ಹುಲಿಗಳು ಸಾವು ; ವಿಷ ಪ್ರಾಶನದ ಶಂಕೆ...!

ಆರೋಪಿಗಳು ದರೋಡೆಗೆ ಹಲವು ತಿಂಗಳುಗಳಿಂದ ಚರ್ಚಿಸಿ, ಪ್ಲ್ಯಾನ್​ ಮಾಡಿದ್ದರು. ಬ್ಯಾಂಕ್​ ಇದ್ದ ಪ್ರದೇಶವನ್ನು ಅಧ್ಯಯನ ಮಾಡಿ, ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಬ್ಯಾಂಕ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ವಿಜಯಕುಮಾರ್ ಮಿರಿಯಾಲ ವರ್ಗಾವಣೆಗೂ ಮುನ್ನವೇ ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳಲ್ಲಿ ಬ್ಯಾಂಕ್​ ಕೀಯನ್ನು ಉಳಿದ ಆರೋಪಿಗಳಿಗೆ ಕೊಟ್ಟು ನಕಲಿ ಕೀ ಮಾಡಿಸಿಕೊಂಡಿದ್ದ. ಮಾತ್ರವಲ್ಲದೆ ಆ ಕೀಗಳು ಕೆಲಸ ಮಾಡುತ್ತವೆಯೋ ಇಲ್ಲವೋ ಎನ್ನುವುದನ್ನೂ ಟೆಸ್ಟ್​ ಮಾಡಿ ಪರಿಶೀಲಿಸಿದ್ದ” ಎಂದು ಹೇಳಿದರು.

ಬ್ಯಾಂಕ್‌ ಮ್ಯಾನೇಜರ್‌ ವಿಜಯಕುಮಾರ ಮೇಲೆ ಜವಾಬ್ದಾರಿ ಇದ್ದುದರಿಂದ ಆತನ ಮೇಲೆ ಯಾರಿಗೂ ಅನುಮಾನ ಬರಬಾರದು ಎಂದು ಆತ   ವರ್ಗಾವಣೆಯಾಗುವ ವರೆಗೂ  ಕಾದಿದ್ದರು.  ವರ್ಗಾವಣೆ ಆಗುವವರೆಗೂ ಕಾದಿದ್ದು, ವರ್ಗಾವಣೆಯಾಗಿ ಹೊಸ ಮ್ಯಾನೇಜರ್​ ಬಂದ ಮೇಲೆ ನಾಲ್ಕನೇ ದಿನಕ್ಕೆ, ದರೋಡೆ ನಡೆಸುವ ಸಂಚು ರೂಪಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ್ ತನ್ನ ಸಹೋದರ ಮತ್ತು ಸ್ನೇಹಿತರ ಸಹಾಯದಿಂದ ನಕಲಿ ಕೀಲಿ ತಯಾರಿಸಿದ್ದ. ಆ ಕೀಲಿಯಿಂದ ಬ್ಯಾಂಕ್ ಲಾಕರ್ ತೆಗೆದು ಚಿನ್ನಾಭರಣ ಕದ್ದಿದ್ದ. ಇದಕ್ಕಾಗಿ ಅವರು ಒಂದು ತಿಂಗಳ ಕಾಲ ಯೋಜನೆ ರೂಪಿಸಿದ್ದರು. ಮೇ 23ಕ್ಕೆ ಇವರು ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಮೇ 23 ರಂದು ಆರ್‌ಸಿಬಿ ಐಪಿಎಲ್‌ ಪಂದ್ಯದ ದಿನ, ಆರ್‌ಸಿಬಿ ಗೆದ್ದರೆ ಪಟಾಕಿ ಹಚ್ಚಿ ಸಂಭ್ರಮಿಸುವಾಗ, ಒಳಗೆ ನುಗ್ಗಿ ದರೋಡೆ ಮಾಡುವ ಸಂಚು ರೂಪಿಸಿದ್ದರು. ಆದರೆ ಆರ್‌ಸಿಬಿ ಸೋತ ಕಾರಣ ಅದನ್ನು ಕೈಬಿಟ್ಟಿದ್ದರು. ಮೇ 24ಕ್ಕೆ ದರೋಡೆ ಮಾಡಲು ನಿರ್ಧರಿಸಿದ್ದರು. ಸಿಸಿಟಿವಿ ಡೈವರ್ಟ್ ಮಾಡಿ, ಹೈಮಾಸ್ಕ್ ಲೈಟ್ ಕೇಬಲ್ ಕಟ್ ಮಾಡಿ ದರೋಡೆ ಮಾಡಿದ್ದರು ಎಂದು ವಿವರಿಸಿದರು.

ಪ್ರಮುಖ ಸುದ್ದಿ :-   ಮಲೆ ಮಹದೇಶ್ವರ ಬೆಟ್ಟದ ಒಂದೇ ಸ್ಥಳದಲ್ಲಿ ತಾಯಿ, 4 ಮರಿ ಹುಲಿಗಳು ಸಾವು ; ವಿಷ ಪ್ರಾಶನದ ಶಂಕೆ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement