ತುಮಕೂರು: ಕುರಿ ಮೇಯಿಸುವ ವೇಳೆಯಲ್ಲಿ ಕೆರೆಯಲ್ಲಿದ್ದ ಗುಂಡಿಯ ಬಳಿ ಹೋದ ಒಂದೇ ಕುಟುಂಬದ ಮೂವರು ಮಕ್ಕಳು ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾವಗಡದಲ್ಲಿ ಶನಿವಾರ ನಡೆದಿದೆ.
ಜಿಲ್ಲೆಯ ಪಾವಗಡ ತಾಲ್ಲೂಕಿನ ಎಸ್.ಆರ್.ಪಾಳ್ಯದ ಬಳಿಯ ಪದ್ಮರಾಜನ ಕೆರೆಯಲ್ಲಿರುವ ಗುಂಡಿಗೆ ಬಿದ್ದು ಒಂದೇ ಕುಟುಂಬದ ಇಬ್ಬರು ಬಾಲಕಿಯರು, ಓರ್ವ ಬಾಲಕ ಮೃತಪಟ್ಟಿದ್ದಾರೆ. ಮೃತರನ್ನು ದೇವರಾಯನ ರೊಪ್ಪದ ಷರೀಫ್(10), ಬಾನು (13), ಚಾಂದ್ ಬಿ(14) ಎಂದು ಗುರುತಿಸಲಾಗಿದೆ.
ಈ ಮೂವರು ಮಕ್ಕಳು ಕುರಿ ಮೇಯಿಸುವ ಸಲುವಾಗಿ ಎಸ್.ಆರ್.ಪಾಳ್ಯದ ಕೆರೆ ಬಳಿ ಆಗಮಿಸಿದ್ದರು ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮೃತ ಮಕ್ಕಳ ಶವವನ್ನು ಹೊರತೆಗೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ