ಚಂಡೀಗಡ: ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಚರಂಜಿತ್ ಸಿಂಗ್ ಚನ್ನಿ ಅವರ ವಿರುದ್ಧ ಧುರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ.
ಭಗವಂತ್ ಮಾನ್, “ನಾನು ಚಮಕೌರ್ ಸಾಹಿಬ್ (ಚರಂಜಿತ್ ಚನ್ನಿ ಕ್ಷೇತ್ರ) ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಿಲ್ಲ, ಆದರೆ ಅವರು ಧುರಿಯಿಂದ ಸ್ಪರ್ಧಿಸಬಹುದು, ನಾನು ಅವರನ್ನು ಸ್ವಾಗತಿಸುತ್ತೇನೆ” ಎಂದು ಹೇಳಿದ್ದಾರೆ.
ಭಗವಂತ್ ಮಾನ್ ಪಂಜಾಬ್ ಚುನಾವಣೆಯಲ್ಲಿ ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಭಗವಂತ್ ಮಾನ್ ಸಂಸದರಾಗಿರುವ ಸಂಗ್ರೂರ್ ಜಿಲ್ಲೆಯಲ್ಲಿ ಈ ಕ್ಷೇತ್ರವಿದೆ. ಜನವರಿ 18ರಂದು ಫೋನ್ ಲೈನ್ ಸಮೀಕ್ಷೆಯಲ್ಲಿ ಶೇಕಡಾ 93%ಕ್ಕಿಂತ ಹೆಚ್ಚು ಜನರು ಅವರಿಗೆ ಮತ ಚಲಾಯಿಸಿದ ನಂತರ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೆಸರಿಸಲಾಯಿತು.
ಧುರಿ ಕ್ಷೇತ್ರದಲ್ಲಿ ಪ್ರಸ್ತುತ ಕಾಂಗ್ರೆಸ್ನ ದಲ್ವೀರ್ ಸಿಂಗ್ ಖಂಗುರಾ ಶಾಸಕರಾಗಿದ್ದಾರೆ. 2012ರಲ್ಲಿ ಅರವಿಂದ್ ಖನ್ನಾ ಗೆದ್ದಾಗಿನಿಂದ ಕಾಂಗ್ರೆಸ್ ಜೊತೆಗಿರುವ ಹೋರಾಟ ಕಠಿಣವಾಗಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ