ಉಕ್ರೇನ್‌ ಯುದ್ಧದಲ್ಲಿ ಮಡಿದ ರಷ್ಯಾ ಸೈನಿಕ ; ಮುಕ್ತಿಗಾಗಿ ಗಯಾಕ್ಕೆ ಬಂದು ಪಿತೃಕಾರ್ಯ ನೆರವೇರಿಸಿದ ಕುಟುಂಬಸ್ಥರು !

ರಷ್ಯಾ ಮೂಲದ ಕುಟುಂಬಸ್ಥರು ಗಯಾದ ಪ್ರಸಿದ್ಧ ಫಾಲ್ಗು ನದಿ ತೀರದಲ್ಲಿ ಈ ಪಿಂಡ್ ದಾನ ಕಾರ್ಯ(ಪಿತೃ ಕಾರ್ಯ)ವನ್ನು ನೆರವೇರಿಸಿದ್ದಾರೆ.
ಉಕ್ರೇನ್‌ ಯುದ್ಧದಲ್ಲಿ ಮಡಿದ ತಮ್ಮ ಸಹೋದರನ ನೆನಪಿನಲ್ಲಿ, ಲಲಿತಾ ರಾಧಾ ರಾಣಿ ಫೇಸ್, ಅವರ ಪತಿ ಸುಂದರ ಫೇಸ್ ಮತ್ತು ಅವರ ಹಿಂದೂ ಧರ್ಮದ ಎಲ್ಲಾ ಸಾಂಪ್ರದಾಯಿಕ ವಿಧಿವಿಧಾನಗಳು ಹಾಗೂ ನಿಯಮಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸಿ ಈ ಪೂಜೆಯನ್ನು ಮಾಡಲಾಗಿದೆ.
ಯುದ್ಧದಲ್ಲಿ ತನ್ನ ಭಾವ ಮರಣ ಹೊಂದಿದ ನಂತರ ಇಡೀ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿತ್ತು ಎಂದು ಸುಂದರ ಫೇಸ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು,”ನನ್ನ ಭಾವ (ಪತ್ನಿಯ ಸಹೋದರ) ಮತ್ತು ತಂದೆಯ ಆತ್ಮಕ್ಕೆ ಮುಕ್ತಿ ಸಿಗಲಿ ಎಂದು ಪ್ರಾರ್ಥಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಗಯಾದಲ್ಲಿ ಪಿತೃ ಕಾರ್ಯ ಮಾಡುವುದರ ಮಹತ್ವ ಪ್ರಪಂಚದಾದ್ಯಂತ ಪ್ರಸಿದ್ಧಿಯಾಗಿದೆ. ಇಲ್ಲಿ ವಿಧಿವಿಧಾನಗಳನ್ನು ಮುಗಿಸುವುದರಿಂದ ಅಗಲಿದ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ದೃಢವಾದ ನಂಬಿಕೆ ನಮಗಿದೆ. ನಮ್ಮ ಕುಟುಂಬದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಂತೋಷ ನೆಲೆಸಬೇಕೆಂಬುದೇ ನಮ್ಮ ಪ್ರಾಮಾಣಿಕ ಆಶಯವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ರಷ್ಯಾದ ಜನರಿಗೂ ಬಿಹಾರದ ಗಯಾ ನಗರದ ಧಾರ್ಮಿಕ ಮಹತ್ವದ ಬಗ್ಗೆ ಚೆನ್ನಾಗಿ ತಿಳಿದಿದೆ, ಅದಕ್ಕಾಗಿಯೇ ಸಾವಿರಾರು ಕಿಲೋಮೀಟರ್ ದೂರ ಪ್ರಯಾಣಿಸಿ ಇಲ್ಲಿಗೆ ಬಂದಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಕುಟುಂಬ ಸದಸ್ಯರು ಫಾಲ್ಗು ನದಿಯ ದಡದಲ್ಲಿ ಪಿತೃಕಾರ್ಯ ನೆರವೇರಿಸಿದರು
ಸ್ಥಳೀಯ ಪುರೋಹಿತರ ಮಾರ್ಗದರ್ಶನ
ಸ್ಥಳೀಯ ಪುರೋಹಿತರಾದ ಕುಮಾರ ಗೌರವ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಷ್ಯಾದ ಈ ಕುಟುಂಬವು ಕೇವಲ ಗಯಾಕ್ಕೆ ಭೇಟಿ ನೀಡುವ ಮತ್ತು ಪಿತೃ ಕಾರ್ಯ ಮಾಡುವ ಉದ್ದೇಶದಿಂದಲೇ ಭಾರತಕ್ಕೆ ಬಂದಿದೆ ಎಂದು ಪುರೋಹಿತರು ಮಾಹಿತಿ ನೀಡಿದ್ದಾರೆ.
ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಸಾವಿರಾರು ಭಕ್ತರು ತಮ್ಮ ಪೂರ್ವಜರ ಆತ್ಮದ ಶಾಂತಿಗಾಗಿ ಗಯಾದ ಫಾಲ್ಗು ನದಿ ತೀರಕ್ಕೆ ಆಗಮಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿಗೆ ಬರುವ ವಿದೇಶಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ವಿಶೇಷವಾಗಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement