ಬಿಜೆಪಿಯಿಂದ 7 ಪದಾಧಿಕಾರಿಗಳ 6 ವರ್ಷ ಉಚ್ಚಾಟನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡುವ ಮೂಲಕ ಪಕ್ಷದ ಆದೇಶ ಉಲ್ಲಂಘಿಸಿರುವ ಏಳು ಪದಾಧಿಕಾರಿಗಳನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ.
ಈ ಏಳು ಜನರನ್ನು 6 ವರ್ಷ ಕಾಲ ಪಕ್ಷದಿಂದ ಉಚ್ಚಾಟಿಸಿ ಎಂದು  ಉಚ್ಚಾಟಿಸಿ  ಆದೇಶ ಹೊರಡಿಸಲಾಗಿದೆ.
ಪಕ್ಷದ ಆದೇಶ ಉಲ್ಲಂಘಿಸಿ, ಪಕ್ಷ ವಿರೋಧಿ ಚಟುವಟಿಕೆಗಣನ್ನು ನಡೆಸುತ್ತಿದ್ದು, ಕೆಲವರು ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘಿಸಿರುವ ಸೆಂಟ್ರಲ್ ಕ್ಷೇತ್ರದ ಸಫಾಯಿ ಕರ್ಮಚಾರಿ ಸದಸ್ಯ ಯಮನಪ್ಪ ವಂದಾಲ, ಎಸ್‌ಸಿ ಮೋರ್ಚಾ ಕಾರ್ಯದರ್ಶಿ ರಾಜು ವಂದಾಲ, ಆಶ್ರಯ ಸಮಿತಿ ಸದಸ್ಯ ಹನಮಂತ ಚಲವಾದಿ, ಬಗರ ಹುಕುಂ ಸದಸ್ಯ ರಾಮು ಯಾದಗಿರಿ, ಮಹಿಳಾ ಮೋರ್ಚಾ ಕಾರ್ಯದರ್ಶಿಗಳಾದ ಭಾರತಿ ಕಾಂಬಳೆ, ದೇವಿಕಾ ಚಲವಾದಿ ಹಾಗೂ ಕಾರ್ಯಕಾರಿಣಿ ಸದಸ್ಯ ಲಿಂಗರಾಜ ಕಲ್ಲಾಪುರ ಅವರನ್ನು ಉಚ್ಚಾಟಿಸಲಾಗಿದೆ ಎಂದು ತಿಳಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement