ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ…!

ಪಾಟ್ನಾ; ಬಿಹಾರದಲ್ಲಿ ನಡೆದ ಉದ್ಯಮಿ ಹಾಗೂ ಹಾಗೂ ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆಗೆ ಸಂಬಂಧಿಸಿದಂತೆ ಪಾಟ್ನಾ ಪೊಲೀಸರು ಭಾನುವಾರ ಒಂದು ಡಜನ್‌ಗೂ ಹೆಚ್ಚು ಶಂಕಿತರನ್ನು ಬಂಧಿಸಿದ್ದಾರೆ. ಹಾರ ಹಿಡಿದುಕೊಂಡು ಉದ್ಯಮಿ ಗೋಪಾಲ ಖೇಮ್ಕಾ ಅವರ ಅಂತ್ಯಕ್ರಿಯೆಗೆ ಆಗಮಿಸಿದ್ದ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಜುಲೈ 6 ರಂದು ಖೇಮ್ಕಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾಗ ಪಾಟ್ನಾದ ಪುನ್‌ಪುನ್ ನಿವಾಸಿ ರೋಷನ್ ಕುಮಾರ ಎಂದು ಗುರುತಿಸಲಾದ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ..
ಪೊಲೀಸ್ ಮೂಲಗಳ ಪ್ರಕಾರ, ಕೊಲೆಯ ಹಿಂದಿನ ಪಿತೂರಿಯಲ್ಲಿ ರೋಷನ್ ಕುಮಾರನ ಸಂಭಾವ್ಯ ಪಾತ್ರದ ಬಗ್ಗೆ ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇದುವರೆಗೆ ಸುಮಾರು ಒಂದು ಡಜನ್ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ.

ಉದ್ಯಮಿ ಗೋಪಾಲ ಖೇಮ್ಕಾ ಅವರನ್ನು ಜುಲೈ 4 ರ ರಾತ್ರಿ ತಡರಾತ್ರಿ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಕೊಂದಿದ್ದರು. ಗಾಂಧಿ ಮೈದಾನ ಪ್ರದೇಶದಲ್ಲಿರುವ ಖೇಮ್ಕಾ ನಿವಾಸದ ಹೊರಗೆ ರಾತ್ರಿ 11:40 ರ ಸುಮಾರಿಗೆ ಅವರು ತಮ್ಮ ಕಾರಿನಿಂದ ಇಳಿಯಲು ಮುಂದಾದಾಗ ಈ ಘಟನೆ ನಡೆದಿದೆ.
ಪ್ರಾಥಮಿಕ ತನಿಖೆಗಳು ಕೊಲೆ ಪೂರ್ವಯೋಜಿತವಾಗಿದ್ದು, ಇದರಲ್ಲಿ ಹಲವಾರು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಸೂಚಿಸುತ್ತವೆ. ಘಟನೆಯ ರಾತ್ರಿ ಖೇಮ್ಕಾ ಅವರ ಚಲನವಲನಗಳನ್ನು ಪತ್ತೆಹಚ್ಚುವಲ್ಲಿ ಗುಂಡು ಹಾರಿಸಿದವನಲ್ಲದೆ, ಇಬ್ಬರು ಸಹಚರರು ಇದ್ದರು ಎಂದು ನಂಬಲಾಗಿದೆ. ಕೃತ್ಯ ಎಸಗುವ ಮೊದಲು ಪಾಟ್ನಾದ ದಾಲ್ಡಾಲಿ ಪ್ರದೇಶದ ಚಹಾ ಅಂಗಡಿಯ ಬಳಿ ಮೂವರು ಇದ್ದರು ಎಂದು ತಿಳಿದು ಬಂದಿದೆ. ಅಲ್ಲಿ ಚಹಾ ಕುಡಿದ ಬಳಿಕ ಅವರು ಖೇಮ್ಕಾ ನಿವಾಸದ ಬಳಿಗೆ ತೆರಳಿದ್ದಾರೆ ಎನ್ನಲಾಗಿದೆ.
ಗುಂಡು ಹಾರಿಸಿದವನು ಖೇಮ್ಕಾ ಅವರ ನಿವಾಸದ ಬಳಿ ಕಾಯುತ್ತಿದ್ದು, ಅಂತಿಮ ಸಂಕೇತಕ್ಕಾಗಿ ಕಾಯುತ್ತಿದ್ದ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಇದೆಂಥ ವಿಚಿತ್ರ | ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಜೀವಂತ-ಓಡಾಡುತ್ತಿದ್ದ 1 ಅಡಿ ಉದ್ದದ ಹಾವುಮೀನು..!

ಖೇಮ್ಕಾ ಅವರ ಮೃತದೇಹವನ್ನು ಜುಲೈ 6 ರಂದು ಪಾಟ್ನಾದ ಗುಲ್ಬಿ ಘಾಟ್‌ನಲ್ಲಿ ಪಾಟ್ನಾದ ಗುಲ್ಬಿ ಘಾಟ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಸಲಾಗಿದೆ. ಖೇಮ್ಕಾ ಅವರ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು. ಅಂತ್ಯಕ್ರಿಯೆಯಲ್ಲಿ ಶಂಕಿತ ರೋಹನ್‌ಕುಮಾರ ಸಹ ಹೂವಿನ ಹಾರ ಹಿಡಿದುಕೊಂಡು ಬಂದಿದ್ದ, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಶಂಕಿತರ ಚಲನವಲನಗಳನ್ನು ಪತ್ತೆಹಚ್ಚಲು, ಪಾಟ್ನಾ ಪೊಲೀಸರು ಬಂಕಿಪುರ ಕ್ಲಬ್, ಗಾಂಧಿ ಮೈದಾನ, ಬುದ್ಧ ಕಾಲೋನಿ ಮತ್ತು ಆದಾಯ ತೆರಿಗೆ ಗೋಲಂಬರ್ ಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲವಾದರೂ, ಪ್ರಮುಖ ಆರೋಪಿ ಮತ್ತು ಪಿತೂರಿಯಲ್ಲಿ ಭಾಗಿಯಾಗಿರುವ ಇತರ ಶಂಕಿತರನ್ನು ಬಂಧಿಸಲು ದಾಳಿಗಳು ನಡೆಯುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಅಧಿಕಾರಿಗಳು ಜೈಲಿನೊಳಗೆ ದಾಳಿ ನಡೆಸಿ, ಪ್ರಸ್ತುತ ತನಿಖೆಯಲ್ಲಿರುವ ಹಲವಾರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement