ಕುಡಿದ ಅಮಲಿನಲ್ಲಿ ಪತ್ನಿಯ ಮೂಗು ಕಚ್ಚಿ ತುಂಡು ಮಾಡಿದ ಪತಿರಾಯ..!

ಧಾರವಾಡ: ಕುಡಿದ ಮತ್ತಿನಲ್ಲಿ ಪತಿರಾಯ ತನ್ನ ಪತ್ನಿಯ ಮೂಗಿಗೆ ಕಚ್ಚಿ ಕತ್ತರಿಸಿ ಪರಾರಿಯಾಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಉಮೇಶ ಎಂಬಾತನೇ ತನ್ನ ಪತ್ನಿಯ ಮೂಗಿದೆ ಕಚ್ಚಿ ತುಂಡು ಮಾಡಿ ಪರಾರಿಯಾದವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
5 ವರ್ಷಗಳ ಹಿಂದೆ ಉಮೇಶ ತನ್ನ ಪತ್ನಿಯನ್ನು ಬಿಟ್ಟು ಎಲ್ಲೋ ಹೋಗಿದ್ದ. ಈ ಕಾರಣದಿಂದ ಗೀತಾ ಅಮ್ಮಿನಬಾವಿಯ ತನ್ನ ತಾಯಿಯ ಮನೆಯಲ್ಲಿ ಬಂದು ನೆಲೆಸಿದ್ದಳು.
ಆದರೆ, ಸುಮಾರು 5 ತಿಂಗಳ ಹಿಂದೆ ಉಮೇಶ ಮತ್ತೆ ಗೀತಾ ತಾಯಿ ಮನೆಗೆ ಬಂದಿದ್ದ. ನಂತರದಲ್ಲಿ ಗೀತಾ ಪತಿ ಜೊತೆ ಅಮ್ಮಿನಬಾವಿ ಗ್ರಾಮದಲ್ಲಿ ವಾಸವಾಗಿದ್ದಳು. ಕಟ್ಟಡ ಕಾಮಗಾರಿ ಮಾಡುವ ಉಮೇಶ ಪ್ರತಿ ದಿನ ಸಾರಾಯಿ ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ. ಕಳೆದ ರಾತ್ರಿ ಕೂಡಾ ಕುಡಿಯುವ ವಿಚಾರವಾಗಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಉಮೇಶ ಬಾಯಿಯಿಂದ ತನ್ನ ಪತ್ನಿ ಗೀತಾ ಮೂಗನ್ನು ಕಚ್ಚಿ ತುಂಡರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಗೀತಾ ಅವರಿಗೆ ತಕ್ಷಣವೇ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಗೆ ಗೀತಾ ತಾಯಿ ದೂರನ್ನ ಕೂಡಾ ನೀಡಿದ್ದು, ಉಮೇಶಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement