ನೇತ್ರ ದಾನದ ಬಗ್ಗೆ ಅರಿವು ಮೂಡಿಸಲು ಸೈಕಲ್ ಜಾಥಾ

ಬೆಂಗಳೂರು : ಗೋ ಗ್ರೀನ್ ಮತ್ತು ಡಾಕ್ಟರ್ ಅಗರವಾಲ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಇಂದು, ಭಾನುವಾರ “ನೇತ್ರ ದಾನ – ಮಹಾ ದಾನ ” ಎಂಬ ಘೋಷ ವಾಕ್ಯದೊಂದಿಗೆ ನೇತ್ರ ದಾನದ ಬಗ್ಗೆ ಜನಲ್ಲಿ ಅರಿವು ಮೂಡಿಸಲು ಬೆಂಗಳೂರಿನ ಬನಶಂಕರಿಯಲ್ಲಿ ಸೈಕಲ್ ಜಾಥಾ ನಡೆಸಲಾಯಿತು . ಜಾಥಾದಲ್ಲಿ ನೂರಾರು ಸೈಕಲ್ ಪಟುಗಳು ಭಾಗವಹಿಸಿದ್ದರು. ಸೈಕಲ್‌ ಜಾಥಾಕ್ಕೆ ಅಗರವಾಲ್ ಆಸ್ಪತ್ರೆಯ ವೈದ್ಯ ಡಾ.ವೆಂಕಟೇಶ ಚಾಲನೆ ನೀಡಿದರು . ಗೋ ಗ್ರೀನ್ ಪ್ರಭಾಕರ ರಾವ್ ಜಾಥಾದ ನೇತೃತ್ವ ವಹಿಸಿದ್ದರು. ಸೈಕಲ್ ಪಟುಗಳಾದ ಮಂಜುನಾಥ ಯಾಜಿ, ಚೈತನ್ಯ, ದೀಪಕ ಬೋನ್ಸಾಯಿ, ಅರುಣ್ ಬೇಬಿ . ಕೌಶಿಕ, ಅರುಣಕುಮಾರ ಭಾಗವಹಿಸಿದ್ದರು. ಎಲ್ಲರಿಗೂ ನೆನಪಿನ ಕಾಣಿಕೆ ವಿತರಣೆ ಮಾಡಲಾಯಿತು. 50 ಕ್ಕೂ ಹೆಚ್ಚುಜನ ಸ್ಥಳದಲ್ಲಿ ನೇತ್ರದಾನ ಮಾಡಲಾಯಿತು.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

ನಿಮ್ಮ ಕಾಮೆಂಟ್ ಬರೆಯಿರಿ

advertisement