ಕೋವಿಡ್ ಸಂತ್ರಸ್ತರ ಕುಟುಂಬಗಳಿಗೆ ರಾಜ್ಯಗಳಿಂದ 50,000 ರೂ ಪರಿಹಾರ ನೀಡಲಾಗುವುದು: ಸುಪ್ರೀಂಕೋರ್ಟಿಗೆ ತಿಳಿಸಿದ ಕೇಂದ್ರ

ನವದೆಹಲಿ: ಕೊರೊನಾ ವೈರಸ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರ 50,000 ರೂ ಪರಿಹಾರ ನೀಡುತ್ತದೆ. ಸರ್ಕಾರ ಈ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದೆ.
ಎಲ್ಲ ರಾಜ್ಯಗಳು ಈ ಮೊತ್ತವನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನೀಡುತ್ತವೆ ಎಂದು ಕೇಂದ್ರ ತಿಳಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (NDMA) ಶಿಫಾರಸುಗಳನ್ನು ಮಾಡಿದೆ, ಅದನ್ನು ಒಪ್ಪಿಕೊಳ್ಳಲಾಗಿದೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕೊರೊನಾ ವೈರಸ್‌ನಿಂದಾಗಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡವರನ್ನು ಒಳಗೊಂಡಂತೆ ಈಗ 50,000 ರೂ.ಗಳ ಎಕ್ಸ್-ಗ್ರೇಷಿಯಾ ಮೊತ್ತವನ್ನು ನೀಡಲಾಗುವುದು. ಆದಾಗ್ಯೂ, ಪರಿಹಾರ ಮೊತ್ತವನ್ನು ಪಡೆಯಲು, ಕುಟುಂಬದ ಸದಸ್ಯರ ಸಾವಿನ ಕಾರಣವನ್ನು ಕೋವಿಡ್ -19 ಎಂದು ದೃಢೀಕರಿಸಬೇಕು.
ಕಾಯಿದೆಯಡಿ ಕೊರೊನಾ ವೈರಸ್‌ ಸಂತ್ರಸ್ತರ ಕುಟುಂಬಗಳಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ವಕೀಲರಾದ ರೀಪಕ್ ಕನ್ಸಾಲ್ ಮತ್ತು ಗೌರವ್ ಕುಮಾರ್ ಬನ್ಸಾಲ್ ಸುಪ್ರೀಂಕೋರ್ಟಿನಲ್ಲಿ ಎರಡು ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 3 ರಂದು, ಕೋವಿಡ್-ಸಂಬಂಧಿತ ಸಾವುಗಳಿಗೆ ಪ್ರಮಾಣಪತ್ರಗಳನ್ನು ನೀಡುವ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ವಿಳಂಬದ ಕುರಿತು ಸುಪ್ರೀಂ ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು ಹಾಗೂ ಸರ್ಕಾರವು ನಿಯಮಗಳನ್ನು ಬಿಡುಗಡೆ ಮಾಡುವ ಹೊತ್ತಿಗೆ, “ಮೂರನೇ ಅಲೆಯೂ ಮುಗಿಯುತ್ತದೆ” ಎಂದು ಟೀಕಿಸಿತ್ತು.
ಕೋವಿಡ್ -19 ರ ಕಾರಣದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಜೀವಹಾನಿಯ ಕಾರಣಕ್ಕಾಗಿ ಎಕ್ಸಡಿಷಿಯಲ್ ನೆರವಿನ ಮಾರ್ಗಸೂಚಿಗಳನ್ನು ಆರು ವಾರಗಳಲ್ಲಿ ಶಿಫಾರಸು ಮಾಡುವಂತೆ ಸುಪ್ರೀಂ ಕೋರ್ಟ್ ತನ್ನ ಜೂನ್ 30 ರ ತೀರ್ಪಿನಲ್ಲಿ ಎನ್‌ಡಿಎಂಎಗೆ ನಿರ್ದೇಶನ ನೀಡಿತ್ತು.

ಪ್ರಮುಖ ಸುದ್ದಿ :-   ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement