ಕರ್ನಾಟಕದಲ್ಲಿ ಶನಿವಾರ ಹೊಸದಾಗಿ 224 ಮಂದಿಯಲ್ಲಿ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು (ಶನಿವಾರ) ಹೊಸದಾಗಿ 224 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 5 ಮಂದಿ ಮೃತಪಟ್ಟಿದ್ದಾರೆ. ಇದೇವೇಳೆ 317 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌.
ಬಾಗಲಕೋಟೆ, ಬಳ್ಳಾರಿ,ಚಿಕ್ಕಬಳ್ಳಾಪುರ, ದಾರವಾಡ,ಗದಗ, ಹಾವೇರಿ, ,ಕಲಬುರಗಿ,ಕೊಪ್ಪಳ, ಕೊಪ್ಪಳ, ರಾಯಚೂರು,ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸೋಂಕು ದಾಖಲಾಗಿಲ್ಲ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,89,713 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 29,43,487ಜನ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಒಟ್ಟು 38,095 ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 8,090 ಸಕ್ರಿಯ ಪ್ರಕಣಗಳಿವೆ.
ಬೆಂಗಳೂರಿನಲ್ಲಿ 157 ಮಂದಿಗೆ ಕಾಣಿಸಿಕೊಂಡಿದ್ದು, 171 ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಸೋಂಕಿನ ಮಾಹಿತಿ..
ಬಾಗಲಕೋಟೆ- 0, ಬಳ್ಳಾರಿ –0, ಬೆಳಗಾವಿ –1, ಬೆಂಗಳೂರು ಗ್ರಾಮಾಂತರ- 8, ಬೆಂಗಳೂರು ನಗರ – 148, ಬೀದರ್ -1,ಚಾಮರಾಜನಗರ- 2,
ಚಿಕ್ಕಬಳ್ಳಾಪುರ- 0, ಚಿಕ್ಕಮಗಳೂರು- 1, ಚಿತ್ರದುರ್ಗ- 3, ದಕ್ಷಿಣ ಕನ್ನಡ – 15, ದಾವಣಗೆರೆ- 1, ಧಾರವಾಡ- 0, ಗದಗ- 0, ಹಾಸನ- 4,
ಹಾವೇರಿ- 0, ಕಲಬುರಗಿ- 0, ಕೊಡಗು- 1, ಕೋಲಾರ- 6, ಕೊಪ್ಪಳ- 0, ಮಂಡ್ಯ- 7, ಮೈಸೂರು- 9, ರಾಯಚೂರು- 0, ರಾಮನಗರ – 0,
ಶಿವಮೊಗ್ಗ- 3, ತುಮಕೂರು- 7, ಉಡುಪಿ- 10, ಉತ್ತರ ಕನ್ನಡ- 3, ವಿಜಯಪುರ – 0, ಯಾದಗಿರಿ- 0

ಪ್ರಮುಖ ಸುದ್ದಿ :-   ಅಶ್ಲೀಲ ವಿಡಿಯೋ ಪ್ರಕರಣ : ಜೆಡಿಎಸ್‌ ನಿಂದ ಪ್ರಜ್ವಲ್‌ ರೇವಣ್ಣ ಅಮಾನತಿಗೆ ನಿರ್ಧಾರ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement