ಜುಲೈ 30ರಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೆಯ ಪೀಠಾಧಿಪತಿಯಾಗಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಪೀಠಾರೋಹಣ

ಕುಮಟಾ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಪೀಠಾಧಿಪತಿಯಾಗಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಗುರು ಪೀಠಾರೋಹಣ ಕಾರ್ಯಕ್ರಮವು ಜುಲೈ 30ರಂದು ಅಪರಾಹ್ನ 3.10ಕ್ಕೆ ಕಾಣಕೋಣದ ಪರ್ತಗಾಳಿಯ ಜೀವೋತ್ತಮ ಮಠದಲ್ಲಿ ನಡೆಯಲಿದೆ ಎಂದು ಶ್ರೀಮಠ ತಿಳಿಸಿದೆ.
ಜುಲೈ 30 ರಂದು ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪೂರ್ವಾಹ್ನ ಶ್ರೀ ರಾಮದೇವ ವೀರ ವಿಠ್ಠಲ ದೇವರ ಮಹಾಪೂಜೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನಮಾಡಿ ಸ್ವಾಮೀಜಿ ಸಿಂಹಾಸನದಲ್ಲಿ ಆಸೀನರಾಗಲಿದ್ದಾರೆ. ಶ್ರೀಮಠದ ಶಾಖಾ ಮಠಗಳ ಸಮಿತಿಯಿಂದ ಪೀಠಾರೂಢ ಗುರುಗಳಿಗೆ ಪಟ್ಟಕಾಣಿಕೆ ಸಲ್ಲಿಸಿ, ಫಲ ಮಾಲಾದಿಗಳನ್ನು ಅರ್ಪಿಸಲಾಗುತ್ತದೆ.
ಚಾರ್ತುಮಾಸ್ಯ ಅಂಗವಾಗಿ ಜುಲೈ 31 ರಂದು ಸಾಯಂಕಾಲ 5 ಗಂಟೆಗೆ ಅವರು ಚಾರ್ತುಮಾಸ್ಯ ವ್ರತ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಂತೆ ಸಮಾರಂಭವನ್ನು ವೈಭವೀಕರಿಸದೇ ಸಂಯೋಜನೆಗೊಳಿಸಲಾಗಿದೆ ಎಂದು ಶ್ರೀ ಮಠ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement