ಹೋಶಿಯಾರಪುರ: : ಹರ್ಯಾಣಾದ ಹೋಶಿಯಾರ್ಪುರ ಜಿಲ್ಲೆಯ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಒಬ್ಬರು ಶನಿವಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸತೀಶ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಹಿರಿಯ ಅಧಿಕಾರಿಗಳಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ. ಹೀಗಾಗಿ ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ವೀಡಿಯೋ ಮಾಡಿ ನಂತರ ಪೊಲೀಸ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಠಾಣೆಯೊಳಗೆ ತನ್ನ ಸರ್ವಿಸ್ ರಿವಲ್ವಾರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರಿಯಾಣ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, 52 ವರ್ಷದ ಎಎಸ್ಐ ಸತೀಶ್ ಕುಮಾರ್ ಅವರು ತಾಂಡಾ ಎಸ್ಎಚ್ಒ ಓಂಕಾರ್ ಸಿಂಗ್ ಅವರು ಸಾವಿಗೆ ಕಾರಣ ಎಂದು ಆರೋಪಿಸಿ ವೀಡಿಯೊ ಹಾಕಿದ್ದಾರೆ.
ಘಟನೆ ಇಂದು, ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಘಟನೆ ವರದಿಯಾಗಿದೆ. ಏತನ್ಮಧ್ಯೆ, ಹೋಶಿಯಾರ್ಪುರ ಎಸ್ಎಸ್ಪಿ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಘಟನೆಯು ದುರದೃಷ್ಟಕರ ಎಂದು ಎಸ್ಎಸ್ಪಿ ಹೇಳಿದ್ದು, ಈ ವಿಷಯದ ಬಗ್ಗೆ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಎಸ್ಎಚ್ಒ ಅವರನ್ನು ಪೊಲೀಸ್ ಲೈನ್ಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಈ ದುಃಖದ ಸಮಯದಲ್ಲಿ ಸತೀಶ್ ಕುಮಾರ್ ಅವರ ಕುಟುಂಬದೊಂದಿಗೆ ಪೊಲೀಸ್ ಇಲಾಖೆ ನಿಂತಿದೆ ಎಂದು ಎಸ್ಎಸ್ಪಿ ಹೇಳಿದರು.
ವೀಡಿಯೊದಲ್ಲಿ, ಎಎಸ್ಐ ಸತೀಶ್ ಕುಮಾರ್ ಅವರು, “ಸೆಪ್ಟೆಂಬರ್ 8 ರಂದು, ಅವರು ಹರಿಯಾಣ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ತಾಂಡಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಓಂಕಾರ್ ಸಿಂಗ್ ಬ್ರಾರ್ ಅಲ್ಲಿಗೆ ಆಗಮಿಸಿ ಮರುದಿನ ಹೈಕೋರ್ಟ್ನಲ್ಲಿ ಎಷ್ಟು ಪ್ರಕರಣಗಳಿವೆ ಎಂದು ಕೇಳಿದರು. ಒಂದೇ ಒಂದು ಪ್ರಕರಣವಿದೆ ಎಂದು ಎಸ್ಎಚ್ಒಗೆ ತಿಳಿಸಿದೆ. ಅವರು ವಿವರಗಳನ್ನು ಕೇಳಿದಾಗ, ತಾನು ಸಂಬಂಧಿಸಿದ ತನಿಖಾಧಿಕಾರಿಗೆ ತಿಳಿದಿದೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ನಂತರ ಎಸ್ಎಚ್ಒ ತನಗೆ ಅನಗತ್ಯ ಪ್ರಶ್ನೆಗಳನ್ನು ಕೇಳಿ ಅವಮಾನ ಮಾಡಿದ್ದಾರೆ ಎಂದು ಎಎಸ್ಐ ಆರೋಪಿಸಿದ್ದಾರೆ. ಎಸ್ಎಚ್ಒ ತನ್ನನ್ನು ಅವಮಾನಿಸುವ ಬದಲು ಗುಂಡು ಹಾರಿಸಲಿ ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನು ಅನುಸರಿಸಿ ಎಸ್ಎಚ್ಒ ತನ್ನ ವಿರುದ್ಧ ವರದಿ ಬರೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸತೀಶ್ ಅವರು, ತಾನು ಅವಮಾನ ಅನುಭವಿಸುತ್ತಿದ್ದೇನೆ ಮತ್ತು ತನ್ನ ಜೀವನವನ್ನು ಅಂತ್ಯಗೊಳಿಸಲು ಉದ್ದೇಶಿಸಿರುವುದಾಗಿ ಹೇಳಿದ್ದಾರೆ. ತನ್ನ ಸಾವಿಗೆ ಓಂಕಾರ್ ಸಿಂಗ್ ಹೊಣೆಗಾರ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಹರಿಯಾಣ ಪೊಲೀಸ್ ಠಾಣೆಗೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಓಂಕರ್ ಸಿಂಗ್ ಅವರು ಪರಿಶೀಲನೆಗಾಗಿ ಹರಿಯಾಣ ಪೊಲೀಸ್ ಠಾಣೆಗೆ ಹೋಗಿದ್ದರು ಮತ್ತು ಅಲ್ಲಿ ಏನಾಯಿತು ಎಂದು ಪೊಲೀಸ್ ಠಾಣೆಯಲ್ಲಿ ಡಿಡಿಆರ್ ದಾಖಲಿಸುವ ಮೂಲಕ ವರದಿಯನ್ನು ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ. ತಾನು ನಿಯಮಾನುಸಾರ ನಡೆದುಕೊಂಡಿದ್ದು, ಎಎಸ್ಐಗೆ ಯಾವುದೇ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ