ಆಗ್ರಾ: ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ನಲ್ಲಿ ಗಂಗಾಜಲ ಪ್ರೋಕ್ಷಣೆ ಮಾಡಿದ್ದಕ್ಕಾಗಿ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಸಮಾಧಿಯಲ್ಲಿ ಪವಿತ್ರ ಗಂಗಾಜಲವನ್ನು ಸಿಂಪಡಿಸಿದ ಆರೋಪದ ಮೇಲೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯು ವಿನೇಶ ಮತ್ತು ಶ್ಯಾಮ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ತಾಜ್ಮಹಲ್ನ ಭದ್ರತೆಯ ಹೊಣೆಯನ್ನು ಸಿಐಎಸ್ಎಫ್ ಹೊಂದಿದೆ. ಸಿಐಎಸ್ಎಫ್ (CISF) ಸಿಬ್ಬಂದಿ ಪ್ರವೇಶ ದ್ವಾರಗಳಲ್ಲಿ ಬ್ಯಾಗ್ಗಳನ್ನು ಪರೀಕ್ಷಿಸುವ ಮತ್ತು ಪರಿಶೀಲಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಅವರು ತಾಜ್ ಆವರಣದ ಒಳಗೆ ಮತ್ತು ಮುಖ್ಯ ಸಮಾಧಿಯಲ್ಲಿ ಜನಸಂದಣಿಯನ್ನು ನಿರ್ವಹಿಸುವ ಹೊಣೆ ಹೊತ್ತಿದ್ದಾರೆ.
ವಿನೇಶ ಮತ್ತು ಶ್ಯಾಮ್ ಎಂಬವರು ಗಂಗಾಜಲ ಇದ್ದ ಬಿಸ್ಲೇರಿ ಬಾಟಲಿ ಹಿಡಿದು ಒಳಗೆ ಹೋಗಿದ್ದರು ಎಂದು ವರದಿಗಳು ಸೂಚಿಸುತ್ತವೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಮಾಧಿಯಂತೆ ಕಾಣುವುದರ ಮೇಲೆ ವ್ಯಕ್ತಿಯೊಬ್ಬರು ನೀರನ್ನು ಸುರಿಯುತ್ತಿರುವುದನ್ನು ಚಿತ್ರಗಳು ತೋರಿಸುತ್ತದೆ. ಈ ಇಬ್ಬರು ವ್ಯಕ್ತಿಗಳನ್ನು ಸಿಐಎಸ್ಎಫ್ ವಶಕ್ಕೆ ಪಡೆದುಕೊಂಡಿದೆ. ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ