ಬೈಕ್ ಸ್ಕಿಡ್ ಆಗಿ ಘಟಪ್ರಭಾ ನದಿಯಲ್ಲಿ ಕೊಚ್ಚಿಹೋದ ಸವಾರರು
ಬೆಳಗಾವಿ : ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಬೈಕ್ ಸ್ಕಿಡ್ ಆಗಿ ಇಬ್ಬರು ನದಿ ನೀರಿನಲ್ಲಿ ಸಿಲುಕಿದ್ದಾರೆ. ಬೈಕ್ ಸವಾರರಾದ ಅವರಾದಿ ಗ್ರಾಮದ ಚನ್ನಪ್ಪ ಹರಿಜನ ( 38), ದುರ್ಗವ್ವ ಹರಿಜನ( 35 ) ನೀರು ಪಾಲಾಗಿದ್ದಾರೆ. ಮುಳುಗಿದವರ ಹುಡುಕಾಟ ನಡೆದಿದೆ. ಇಬ್ಬರು ವೈಯಕ್ತಿಕ ಕೆಲಸ ನಿಮಿತ್ತ ಮಹಾಲಿಂಗಪುರಕ್ಕೆ ತೆರಳುತ್ತಿದ್ದರು. … Continued