ರಾಜ್ಯ ಮಟ್ಟದ ಪ್ರಶಸ್ತಿಗೆ ಹೆಸರು ಆಹ್ವಾನ

ಹುಬ್ಬಳ್ಳಿ : ಹಿರಿಯ ಸಾಹಿತಿ ಡಾ.ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಮೂಲಕ ರಾಜ್ಯಮಟ್ಟದ “ಸಂಗಮ ಸಿರಿ” ಪ್ರಶಸ್ತಿಗೆ ಹೆಸರು ಆಹ್ವಾನಿಸಲಾದೆ. ಇದು ಪ್ರಶಸ್ತಿ ಜೊತೆಗೆ 10 ಸಾವಿರ ರೂ.ಹಾಗೂ ಫಲಕವನ್ನು ನೀಡಿ ಗೌರವಿಸಲಾಗುತ್ತದೆ.
ವಚನ ಸಾಹಿತ್ಯ ಕ್ಷೇತ್ರದಲ್ಲಿ ವಚನಗಳ ರಚನೆ ಮಾಡಿದವರಿಗೆ ಈ ವರ್ಷದ ಪ್ರಶಸ್ತಿ ನೀಡಲಾಗುತ್ತದೆ. ವಚನ ರಚನೆಕಾರರು ತಮ್ಮ ಮಾಹಿತಿಯನ್ನು ಬರುವ ಆಗಸ್ಟ್‌ 15 ರೊಳಗೆ ನೀಡಬಹುದು. ವಚನಕಾರರ ಹೆಸರನ್ನು ಯಾರಾದರೂ ಸೂಚಿಸಬಹುದು. ಕಳೆದ ಬಾರಿ ವಚನ ಸಾಹಿತ್ಯದ ಸಂಶೋಧನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಬುರ್ಗಿಯ ಡಾ.ದಂಡೆ ದಂಪತಿಗೆ ನೀಡಲಾಗಿತ್ತು.
ಹೆಚ್ಚಿನ ವಿವರಗಳಿಗೆ ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ 338,ಅಕ್ಷಯ ಕಾಲೋನಿ,ಗೋಕುಲ ರಸ್ತೆ,ಹುಬ್ಬಳ್ಳಿ ಮೊಬೈಲ್‌-9060933596, 9986476733ಗೆ ಸಂಪರ್ಕಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷರಾದ ಜಿ.ಬಿ.ಗೌಡಪ್ಪಗೊಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement