ಕಾರ್ತಿಕದ ವರೆಗೆ ಜಲ ಗಂಡಾಂತರ..ಸಂಕ್ರಾಂತಿ ವೇಳೆಗೆ ದೇಶದಲ್ಲಿ ದೊಡ್ಡ ಅವಘಡ: ಕೋಡಿಮಠದ ಸ್ವಾಮೀಜಿ ಭವಿಷ್ಯ

posted in: ರಾಜ್ಯ | 0

ಹಾಸನ: ಕಾರ್ತಿಕದವರೆಗೆ ಜಲ ಗಂಡಾಂತರ ಹಾಗೂ ಸಂಕ್ರಾಂತಿ ವೇಳೆಗೆ ದೇಶದಲ್ಲಿ ದೊಡ್ಡ ಗಂಡಾಂತರ ಸಂಭವಿಸಲಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ತಮ್ಮ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ದೇಶಕ್ಕೆ ಸಂಕ್ರಾಂತಿಯೊಳಗೆ ದೊಡ್ಡ ಗಂಡಾಂತರವಿದೆ ಎಂದು ಹೇಳಿದ್ದು, ಕಾರ್ತಿಕ ಮಾಸದವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳೆಲ್ಲ ತುಂಬಲಿವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಬಗ್ಗೆಯಾಗಲೀ ಸದ್ಯದ ರಾಜಕಾರಣದ ಬಗ್ಗೆ ಆಷಾಢದಲ್ಲಿ ಅಶುಭ ಹೇಳುವುದು ಬೇಡ. ಪೂರ್ಣ ಪ್ರಮಾಣದ ಮಂತ್ರಿಮಂಡಲ ರಚನೆಯಾದ  ನಂತರ ಹೇಳುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಇನ್ನೂ ಹೆಚ್ಚಾಗಲಿದೆ. ದೇವರ ಕೃಪೆಯಿಂದ ಮುಂದೆ ಒಳ್ಳೆಯ ದಿನಗಳು ಬರಲಿವೆ. ಆದರೆ, ದೇಶದಲ್ಲಿ ಆಶ್ವೀಜ ಮಾಸದ ನಂತರ ಸಂಕ್ರಾಂತಿಯೊಳಗೆ ದೊಡ್ಡ ಅವಘಡ ಸಂಭವಿಸಲಿದೆ ಎಂದು ಸ್ವಾಮೀಜಿ ಪುನರುಚ್ಚರಿಸಿದ್ದಾರೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement