ಸಾಗರ ರಾಣಾ ಹತ್ಯೆ ಪ್ರಕರಣ: ಒಲಿಂಪಿಕ್‌ ಕುಸ್ತಿಪಟು ಸುಶೀಲಕುಮಾರಗೆ ಮತ್ತಷ್ಟು ಸಂಕಟ

ನವ ದೆಹಲಿ: ಭಾರತದ ಖ್ಯಾತ ಭಾರತೀಯ ಕುಸ್ತಿಪಟು ಸುಶೀಲ್ ಕುಮಾರ್ ಅವರು ಜೂನಿಯರ್ ಕುಸ್ತಿಪಟು ಸಾಗರ್ ರಾಣಾ ಸಾವಿಗೆ ಕಾರಣವಾದ ಛತ್ರಸಾಲ ಕ್ರೀಡಾಂಗಣದಲ್ಲಿ ನಡೆದ ಬಡಿದಾಟಕ್ಕೆ ಸಂಬಂಧಿಸಿದಂತೆ  ತೀವ್ರ ತೊಂದರೆಗೆ ಸಿಲುಕಿದ್ದಾರೆ.

ಸುಶೀಲ್ ಜೂನಿಯರ್‌ ಕುಸ್ತಿಪಟು ರಾಣಾ ಅವರನ್ನು ಹೊಡೆಯುವ ದೃಶ್ಯಗಳು ಗುರುವಾರ ಸಾರ್ವಜನಿಕವಾಗಿ ಪ್ರಕಟವಾದ ನಂತರ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗದ ಆರೋಪದ ನಂತರ ಚಂಡೀಗಡಕ್ಕೆ ಕರೆದೊಯ್ದಿದ್ದಾರೆ.

ರಾಣಾ   ನಿಧನದ ನಂತರ ಸುಶೀಲ್ ಪರಾರಿಯಾಗಿದ್ದ. ಕೊನೆಗೆ ದೆಹಲಿ ಪೊಲೀಸರು ಪಶ್ಚಿಮ ದೆಹಲಿಯ ಮುಂಡ್ಕಾದಿಂದ ಆತನನ್ನು ಬಂಧಿಸಿ 6 ದಿನಗಳ ಪೊಲೀಸ್‌ ಕಸ್ಟಡಿಗೆ ಕಳುಹಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಸುಶೀಲ್  ಸಾಗರಗೆ ಪಾಠ ಕಲಿಸಲು ಬಯಸಿದ್ದಾಗಿ ಒಪ್ಪಿಕೊಂಡಿದ್ದಾನೆ ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಆದಾಗ್ಯೂ, ಕುಸ್ತಿಪಟು ರಾಣಾಳನ್ನು ಕೊಲ್ಲಲು ಬಯಸಿರಲಿಲ್ಲ.  ಆದರೆ ಆತನನ್ನು ಹೊಡೆದಿರುವುದಾಗಿ ತಿಳಿಸಿದ್ದಾನೆ. ಅಂದಿನಿಂದ ಪೊಲೀಸರು ಸುಶೀಲ್ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಜನರನ್ನು ಹುಡುಕುತ್ತಿದ್ದಾರೆ. ಅನುಭವಿ ಕುಸ್ತಿಪಟು ಚಂಡೀಗಡಮತ್ತು ಹರಿಯಾಣದಲ್ಲಿ ವಾಸಿಸುವ ಕೆಲವೇ ಜನರ ಹೆಸರನ್ನು ತೆಗೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಆತನನ್ನು ಚಂಡೀಗಡಕ್ಕೆ ಕರೆದೊಯ್ಯಲು ಪೊಲೀಸರು ನಿರ್ಧರಿಸಿದ್ದಾರೆ.

ಪ್ರಮುಖ ಸುದ್ದಿ :-   ಸ್ಟೀಲ್‌ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಿಸಿದ ಜಿಂದಾಲ್ ಸ್ಟೀಲ್‌ ಕಂಪನಿ ; ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ

ಸುಶೀಕುಮಾರನನ್ನು ಭಾರೀ ಭದ್ರತೆಯೊಂದಿಗೆ ಚಂಡೀಗಡಕ್ಕೆ ಕರೆದೊಯ್ಯಲಾಯಿತು. ವಿಚಾರಣೆ ವೇಳೆ ಸುಶೀಲ್ ಹೆಸರಿಸಿದ್ದ ಜನರನ್ನು ಪೊಲೀಸರು ಹುಡುಕುತ್ತಿದ್ದಾರೆ, ಅವರು  ಛತ್ರಸಾಲ ಜಗಳಕ್ಕೆ ಶಸ್ತ್ರಾಸ್ತ್ರಗಳನ್ನು ನೀಡಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement