ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಹೊರಿಸಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಸಿಂಗ್, ಕಳೆದ ವಾರ ಅವರ ವರ್ಗಾವಣೆ ಕಾನೂನುಬಾಹಿರ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದು ಮತ್ತು ಅದನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮಾರ್ಚ್ 17 ರಂದು ಸಿಂಗ್ ಅವರನ್ನು ಮುಂಬೈ ಪೊಲೀಸ್ ಮುಖ್ಯಸ್ಥ ಹುದ್ದೆಯಿಂದ ವರ್ಗಾಯಿಸಿ, ಮಹಾರಾಷ್ಟ್ರ ಡಿಜಿಪಿಯ ಹೆಚ್ಚುವರಿ ಉಸ್ತುವಾರಿ ವಹಿಸಿಕೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಾಗ್ರೇಲ್ ಅವರನ್ನು ಮುಂಬೈ ಪೊಲೀಸ್ ಹೊಸ ಆಯುಕ್ತರನ್ನಾಗಿ ನೇಮಿಸಿತ್ತು.
ವರ್ಗಾವಣೆಯ ಕೆಲವು ದಿನಗಳ ನಂತರ, ಐಪಿಎಸ್ ಅಧಿಕಾರಿ ಕಳೆದ ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ದೇಶ್ಮುಖ್ ಪ್ರಸ್ತುತ ಎನ್ಐಎ ಬಂಧನದಲ್ಲಿದ್ದ ಸಚಿನ್ ವಾಝೆ ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಮಾಸಿಕ 100 ಕೋಟಿ ರೂ., ಹಣ ಸಂಗ್ರಹಿಸುವಂತೆ ಒತ್ತಡ ಹೇರಿದ್ದರು ಎಂದು ತಿಳಿಸಿದ್ದರು.
ಫೆಬ್ರವರಿ 25 ರಂದು ಅಂಬಾನಿಯ ನಿವಾಸದ ಹೊರಗೆ ಸ್ಫೋಟಕಗಳಿಂದ ತುಂಬಿದ ಎಸ್ಯುವಿಯನ್ನು ಇರಿಸುವಲ್ಲಿ ವಾಝೆ ಅವರ ಪಾತ್ರವನ್ನು ಎನ್ಐಎ ಪರಿಶೀಲಿಸುತ್ತಿದೆ.
ಏತನ್ಮಧ್ಯೆ, ಪರಂ ಬೀರ್ ಸಿಂಗ್ ಸೋಮವಾರ ಮಹಾರಾಷ್ಟ್ರ ಹೋಮ್ ಗಾರ್ಡ್ ಮಹಾನಿರ್ದೇಶಕರಾಗಿ (ಡಿಜಿ) ಅಧಿಕಾರ ವಹಿಸಿಕೊಂಡರು.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಸೋಮವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ದೇಶಮುಖ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದು, ಅವರ ವಿರುದ್ಧದ ಆರೋಪಗಳು ಅಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 5 ರಿಂದ 15 ರವರೆಗೆ ದೇಶ್ಮುಖ್ ಕೊರೊನಾ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಆಸ್ಪತ್ರೆ ಪ್ರಮಾಣಪತ್ರ ನೀಡಿದೆ … ಫೆಬ್ರವರಿ 16 ರಿಂದ 27 ರ ವರೆಗೆ ಅವರು ಹೋಮ್ ಟ್ವಾರಂಟೈನ್ನಲ್ಲಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ದೇಶ್ಮುಖ್ ರಾಜೀನಾಮೆ ತಳ್ಳಿಹಾಕಿದ ಪವಾರ್ “ದೇಶ್ಮುಖ್ ವಿರುದ್ಧ ಆರೋಪಗಳನ್ನು ಹೊರಿಸಲಾದ ಅವಧಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ದರಿಂದ ಅವರನ್ನು ವಜಾಗೊಳಿಸುವ ಬೇಡಿಕೆಗಳು ಯಾವುದೇ ವಾಸ್ತವಾಂಶ ಹೊಂದಿಲ್ಲ” ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ