ಆಂಧ್ರ: ಟಿಡಿಪಿ ರಾಜ್ಯಾಧ್ಯಕ್ಷರ ಬಂಧನ

ಹೈದರಾಬಾದ್: ಬೆದರಿಕೆ ಪ್ರಕರಣದಲ್ಲಿ ಪೊಲೀಸರು ಟಿಡಿಪಿ ರಾಜ್ಯಾಧ್ಯಕ್ಷ ಹಾಗೂ  ಶಾಸಕ ಕೆ ಅಚನ್ನೈದು ಅವರನ್ನು ಬಂಧಿಸಿದ್ದು, ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ನಿಮ್ಮಡಾ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.  ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ   ಟಿಡಿಪಿ ರಾಜ್ಯಾಧ್ಯಕ್ಷರನ್ನು ಬಂಧಿಸಲಾಗಿದೆ. ತಮ್ಮ ಸರ್ಪಂಚ್ ಅಭ್ಯರ್ಥಿಗೆ ಬೆದರಿಕೆ ಹಾಕಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಆರೋಪಿಸಿದೆ.

ಅಚನ್ನೈದು ಅವರನ್ನು ಮಂಗಳವಾರ ಬೆಳಿಗ್ಗೆ ಅವರ ನಿಮ್ಮಡಾ ನಿವಾಸದಿಂದ ಬಂಧಿಸಿ ಕೋಟಬೊಮ್ಮಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಚ್ಚಣ್ಣೈದು ಅವರ ಪತ್ನಿ ವಿಜಯ ಮಾಧವಿ ಟಿಡಿಪಿ ಅಭ್ಯರ್ಥಿಯಾಗಿ ನಿಮ್ಮದ ಸರ್ಪಂಚ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ವೈಎಸ್ಆರ್ ಕಾಂಗ್ರೆಸ್‌ ಅಚನ್ನೈದು ಅವರ ಆಪ್ತ ಸಂಬಂಧಿ ಕಿಂಜರಪು ಅಪ್ಪಣ್ಣ ಅವರನ್ನು ಕಣಕ್ಕಿಳಿಸಿದೆ.

ವೈಎಸ್ಆರ್ಸಿ ಪಕ್ಷದ  ತೆಕ್ಕಳಿ ಸಂಯೋಜಕ ದುವಾಡಾ ಶ್ರೀನಿವಾಸ್ ಅವರೊಂದಿಗೆ ನಾಮಪತ್ರ ಸಲ್ಲಿಸಲು ಬಂದಾಗ ಅಚ್ನನೈಡು ಮತ್ತು ಅವರ ಮಿತ್ರರು ಬೆದರಿಕೆ ಹಾಕಿದ್ದಾರೆ  ಎಂದು ಅಪ್ಪಣ್ಣ ಆರೋಪಿಸಿದ್ದಾರೆ. ಕೊಚಬೊಮ್ಮಲಿ ಪೊಲೀಸರು ಅಚ್ಚನ್ನೈಡು ಸೇರಿದಂತೆ 22 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಚನ್ನೈಡುವನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಏತನ್ಮಧ್ಯೆ, ಟಿಡಿಪಿಯು ಅಚನ್ನೈಡು ಅವರ ಬಂಧನವನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿದೆ.   ಟಿಡಿಪಿ ಮುಖ್ಯಸ್ಥ ಮತ್ತು ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು   ಇದನ್ನು ಪ್ರತೀಕಾರದ ರಾಜಕಾರಣದ ಉತ್ತುಂಗ ಎಂದು ಖಂಡಿಸಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement