ಲೋಕಸಭೆ ಕಲಾಪ ಸೋಮವಾರ ಮುಂದೂಡಿಕೆ

ನವ ದೆಹಲಿ: ಕೃಷಿ ಕಾನೂನುಗಳ ವಿರುದ್ಧ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿದ್ದು, ಲೋಕಸಭೆ ಕಲಾವನ್ನು ಫೆ.೮ಕ್ಕೆ ಮುಂದೂಡಲಾಯಿತು. ಪ್ರತಿಭಟನೆಯೊಂದಿಗೆ ವಿರೋಧ ಪಕ್ಷದ ಸದಸ್ಯರು ಮುಂದುವರಿದಿದ್ದರಿಂದ ಲೋಕಸಭಾ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಶುಕ್ರವಾರ ಸಂಜೆ 4 ಗಂಟೆಗೆ ಸದನ ಆರಂಭವಾದ ನಂತರ ಕಾಂಗ್ರೆಸ್, ಎಡ ಪಕ್ಷಗಳು ಮತ್ತು ಡಿಎಂಕೆ ಸದಸ್ಯರು ಸಬಾಪತಿಗಳ ಎದುರಿನ ಬಾವಿಗೆ ಬಂದು ಹೊಸ ಕೃಷಿ ಕಾನೂನುಗಳ ವಿರುದ್ಧ ಘೋಷಣೆ ಕೂಗಿದರು ಹಾಗೂ ಫಲಕಗಳನ್ನು ಪ್ರದರ್ಶಿಸಿದರು.
ಪ್ರತಿಪಕ್ಷದ ಸದಸ್ಯರು ಘೋಷಣೆಗಳನ್ನು ಮುಂದುವರಿಸುತ್ತಿದ್ದಂತೆ, ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಪ್ರಮುಖ ವಿಷಯವೊಂದನ್ನು ಚರ್ಚಿಸುವುದರಿಂದ ಬಿರ್ಲಾ ಕಲಾಪದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಕಾಂಗ್ರೆಸ್, ಡಿಎಂಕೆ ಮತ್ತು ಎಡ ಸದಸ್ಯರು ಬಾವಿಗೆ ಇಳಿದರೆ ಟಿಎಂಸಿಯ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದರು. ಗದ್ದಲ ಮುಂದುವರಿದ ಕಾರಣ ಸಂಜೆ 4.15 ರ ಸುಮಾರಿಗೆ ಬಿರ್ಲಾ ಸದನವನ್ನು ಸಂಜೆ 6 ಗಂಟೆಯ ವರೆಗೆ ಮುಂದೂಡಿದ್ದರು. ಆದರೆ ಆಗಲೂ ಪರಿಸ್ಥಿತಿ ಸುಧಾರಿಸಿದ ಕಾರಣ ಮಕಲಾಪವನ್ನು ಸೋಮವಾರ ಸೋಮವಾರಕ್ಕೆ ಮುಂದೂಡಲಾಯಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement