ನಡ್ಡಾ ಪೋಸ್ಟರ್‌ ಕಿತ್ತಿದ್ದಕ್ಕೆ ಬಿಜೆಪಿ-ಟಿಎಂಸಿ ಆರೋಪ ಪ್ರತ್ಯಾರೋಪ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಪರಿವರ್ತನ ರಥಯಾತ್ರೆ’ ಗಿಂತ ಮುಂಚೆ ಮಾಲ್ಡಾದಲ್ಲಿ ಬಿಜೆಪಿ ಪಕ್ಷದ  ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ.

ಈ ಘಟನೆಗೆ ಆಡಳಿತಾರೂಢ ಟಿಎಂಸಿ ಸರ್ಕಾರವೇ ಇದಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ, ಆದರೆ, ತಮ್ಮ ಪಕ್ಷದ ಮುಖಂಡರ ಮಧ್ಯದ ಭಿನ್ನಾಭಿಪ್ರಾಯಗಳಿಂದಾಗಿ ಬಿಜೆಪಿಯವರೇ ನಡ್ಡಾ ಅವರ ಪೋಸ್ಟರ್‌ಗಳನ್ನು ಕಿತ್ತು ಹಾಕಿದ್ದಾರೆ ಎಂದು ಟಿಎಂಸಿ ಪ್ರತ್ಯಾರೋಪ ಮಾಡಿದೆ. ವಿಶೇಷವೆಂದರೆ, ಚುನಾವಣೆ ಪ್ರಯುಕ್ತ  ನಡ್ಡಾ ಶನಿವಾರ ನಾಡಿಯಾ ಜಿಲ್ಲೆಯಲ್ಲಿ ‘ರಥಯಾತ್ರೆ’ಗೆ ಚಾಲನೆ ನೀಡುವರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement