ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ: ರೈತರಿಗೆ ಪ್ರಧಾನಿ ಅಭಯ

ಕೃಷಿ ಕಾನೂನುಗಳನ್ನು ಹಸಿರು ಕ್ರಾಂತಿಯೊಂದಿಗೆ ಹೋಲಿಸಿದ ಪ್ರಧಾನಿ

 

ನವ ದೆಹಲಿ; ಕೃಷಿ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಪುನಃ ಆಶ್ವಾಸನೆ ನೀಡಿದರು.
ರಾಷ್ಟ್ರಪತಿ ಭಾಷಣಕ್ಕೆ ಅಭಿನಂದನಾ ಚರ್ಚೆಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ನಾವು ಈ ಸಮಯವನ್ನು ಕಳೆದುಕೊಳ್ಳಬಾರದು, ಪ್ರಗತಿ ಹೊಂದಬೇಕು, ದೇಶವನ್ನು ಹಿಂದಕ್ಕೆ ಕರೆದೊಯ್ಯುವುದು ಬೇಡ. ಈ ಕಾನೂನುಗಳಿಂದ ರೈತರಿಗೆ ಪ್ರಯೋಜನೆವಾಗಿದೆಯೇ ಎಂದು ನೋಡುತ್ತೇವೆ. ಇದರಿಂದ ತೊಂದರೆಯಾದರೆ ಅಥವಾ ಹಾನಿಯಾದರೆ ಖಂಡಿತ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಹಸಿರು ಕ್ರಾಂತಿ ಸಂದರ್ಭ ನೆನಪಿಸಿದ ಮೋದಿ, ಲಾಲ್‌ ಬಹದ್ದೂರ ಶಾಸ್ರೀಯವರ ಕಾಲದಲ್ಲಿ ಕೃಷಿ ಸಚಿವರಾಗಲು ಯಾರೂ ಸಿದ್ಧರಿರಲಿಲ್ಲ. ಯೋಜನಾ ಆಯೋಗವು ಆಗಿನ ಕೃಷಿ ಸುಧಾರಣೆಗಳನ್ನು ವಿರೋಧಿಸಿತ್ತು.ಆದರೆ  ಶಾಸ್ತ್ರಿಯವರು ಮುಂದೆ ಸಾಗಿದರು. ಎಡಪಂಥೀಯರು ಅಮೆರಿಕದ ಸೂಚನೆಯ ಮೇರೆಗೆ ಇದನ್ನು ಮಾಡಲಾಗುತ್ತಿದೆ ಎಂಬ ಮಾತನ್ನು ಆಗಲೂ ಹೇಳಿದ್ದರು. ಕಾಂಗ್ರೆಸ್ ನಾಯಕರನ್ನು ‘ಅಮೆರಿಕನ್ ಏಜೆಂಟರು’ ಎಂದು ಕರೆಯಲಾಯಿತು. ಆಗ ಸಾವಿರಾರು ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು, ಆದರೆ ಲಾಲ್ ಬಹದ್ದೂರ್ ಶಾಸ್ತ್ರಿ ಮುಂದಕ್ಕೆ ಸಾಗಿದರು. ಪರಿಣಾಮ ಇಂದು ನಮ್ಮಲ್ಲಿ ಆಹಾರದ ಹೆಚ್ಚುವರಿ ಉತ್ಪಾದನೆ ಇದೆ ಎಂದರು.

ನಾವು ಉತ್ತಮ ಸಲಹೆಗಳನ್ನು ಸ್ವೀಕರಿಸುತ್ತೇವೆ. ಆಂದೋಲನ ನಡೆಸುತ್ತಿರುವ ರೈತರಿಗೆ ಉತ್ತಮ ವೈಶಿಷ್ಟ್ಯಗಳನ್ನು ವಿವರಿಸುವ ಮೂಲಕ ದೇಶವನ್ನು ಮುಂದೆ ಕೊಂಡೊಯ್ಯಲು ಆಹ್ವಾನಿಸಲು ಬಯಸುತ್ತೇವೆ.
ಕೃಷಿ ಸಚಿವರು ರೈತರೊಂದಿಗೆ ಮಾತನಾಡುತ್ತಿದ್ದಾರೆ. ಪ್ರತಿಭಟನೆ ಮಾಡುವುದು ಅವರ ಹಕ್ಕು ಆದರೆ ವಯಸ್ಸಾದ ರೈತರು ಪ್ರತಿಭಟನೆಗೆ ಬರುವುದು ಬೇಡ, ಧರಣಿ ಕುಳಿತಿಕೊಳ್ಳುವುದು ಬೇಡ. ಅವರಿಗೆ ಮನೆಗೆ ಹೋಗಲು ಹೇಳಿ. ನಾನು ಸಂಸತ್ತಿನ ಮೂಲಕ ರೈತರಿಗೆ ಆಹ್ವಾನ ವಿಸ್ತರಿಸಲು ಬಯಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ನಾವು ಸವಾಲುಗಳನ್ನು ಎದುರಿಸುತ್ತೇವೆ. ನಾವು ಪರಿಹಾರದ ಭಾಗವಾಗಬೇಕೆ ಅಥವಾ ಸಮಸ್ಯೆಯ ಭಾಗವಾಗಬೇಕೆ ಎಂದು ನಾವು ನಿರ್ಧರಿಸಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಣ್ಣ ರೈತರ ಬಗ್ಗೆ ಚೌಧರಿ ಚರಣ್ ಸಿಂಗ್ ಅವರನ್ನು ಉಲ್ಲೇಖಿಸಿ ಮೋದಿ. ಇಂದು, 68% ರೈತರು ಸಣ್ಣ ಮತ್ತು ಅಲ್ಪ ರೈತರು. 12 ಕೋಟಿಗೂ ಹೆಚ್ಚು ರೈತರು 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. 12 ಕೋಟಿ ರೈತರ ಬಗ್ಗೆ ನಮಗೆ ಜವಾಬ್ದಾರಿ ಇಲ್ಲವೇ? ಚರಣ್ ಸಿಂಗ್ ಅವರ ಈ ಪ್ರಶ್ನೆ ಇನ್ನೂ ಅಸ್ತಿತ್ವದಲ್ಲಿದೆ, ನಾವು ಪರಿಹಾರವನ್ನು ಕಂಡುಕೊಳ್ಳಬೇಕಲ್ಲವೇ? ಬ್ಯಾಂಕುಗಳನ್ನು ಸಾಲಕ್ಕಾಗಿ ಸಂಪರ್ಕಿಸದ ಕಾರಣ ಸಣ್ಣ ರೈತರಿಗೆ ಪ್ರಯೋಜನವಾಗುವುದಿಲ್ಲ. ಅಂತಹ ರೈತರಿಗೆ ಬ್ಯಾಂಕ್ ಖಾತೆ ಕೂಡ ಇಲ್ಲ.2014 ರ ನಂತರ, ನಾವು ಬೆಳೆ ವಿಮಾ ಯೋಜನೆಯನ್ನು ಸಣ್ಣ ರೈತರಿಗೆ ಒಳಗೊಳ್ಳುವಂತೆ ಪರಿವರ್ತಿಸಿದ್ದೇವೆ. ಬೆಳೆ ವಿಮೆ ಮೂಲಕ 90,000 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ನಾವು ಈಗ ಮೀನುಗಾರರನ್ನೂ ಈ ಯೋಜನೆಯಲ್ಲಿ ಸೇರಿಸಿದ್ದೇವೆ. ಪಿಎಂ-ಕಿಸಾನ್ ಯೋಜನೆ 10 ಕೋಟಿ ಕುಟುಂಬಗಳಿಗೆ ನೀಡಲಾಗುತ್ತಿದೆ. ಬಂಗಾಳ ಸರ್ಕಾರ ಇದನ್ನು ನಿರ್ಬಂಧಿಸದಿದ್ದರೆ ಈ ಸಂಖ್ಯೆಗಳು ಹೆಚ್ಚಾಗಬಹುದು ಎಂದು ಹೇಳಿದರು.
ಭಾರತ ಪ್ರಜಾಪ್ರಭುತ್ವದ ತಾಯಿ:
ಭಾರತದ ಪ್ರಜಾಪ್ರಭುತ್ವದ ಬಗ್ಗೆ ಕೆಲವರು ಮಾತನಾಡುತ್ತಾರೆ. ಕೆಲವು ಆಕ್ಷೇಪಾರ್ಹ ಟೀಕೆಗಳನ್ನೂಮಾಡುತ್ತಾರೆ. ನಾನು ಸದಸ್ಯರ ಮಾತುಗಳನ್ನು ಕೇಳುತ್ತಿದ್ದಾಗ, ನನ್ನಷ್ಟಕ್ಕೇ ನನಗೆ ಅನಿಸಿದ್ದು ಅವರು ಬಂಗಾಳದ ಬಗ್ಗೆ ಮಾತನಾಡುತ್ತಿದ್ದಾರೋ ಅಥವಾ ಇಡೀ ದೇಶದ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂದು.ಭಾರತದ ರಾಷ್ಟ್ರೀಯತೆ ಸತ್ಯಂ ಶಿವಂ ಸುಂದರಂ ಆಧರಿಸಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಉಲ್ಲೇಖಿಸಿ ಅವರು ಹೇಳಿದರು.
ನಾವು ಇತ್ತೀಚಿನ ವರ್ಷಗಳಲ್ಲಿ ನೇತಾಜಿಯ ದೃಷ್ಟಿಯನ್ನು ಕಳೆದುಕೊಂಡಿದ್ದೇವೆ ಮತ್ತು ಇಂದು ನಾವು ನಮ್ಮನ್ನು ಹುಡುಕುತ್ತಿದ್ದೇವೆ. ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ನಮ್ಮ ಯುವ ಪೀಳಿಗೆಗೆ ಹೇಳಲು ನಾವು ವಿಫಲರಾಗಿದ್ದೇವೆ ಎಂದು ಹೇಳಿದರು.
ಜಗತ್ತು ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಸಮಯದಲ್ಲಿ, ನಾವು ದಾಖಲೆಯ ಎಫ್‌ಡಿಐಗೆ ಆಹ್ವಾನಿಸಿದ್ದೇವೆ. ನಾವು ಎರಡು ಅಂಕೆಗಳ ಬೆಳವಣಿಗೆಯತ್ತ ಸಾಗುತ್ತಿದ್ದೇವೆ. ನಮ್ಮಲ್ಲಿ ದಾಖಲೆಯ ಸಂಖ್ಯೆಯ ಸ್ಟಾರ್ಟ್ ಅಪ್‌ಗಳು ಮತ್ತು ಯುನಿಕಾರ್ನ್‌ಗಳಿವೆ ಎಂದರು.ನನ್ನ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಬದ್ಧವಾಗಿದೆ. ನಾವು ಬಡತನವನ್ನು ನಿರ್ಮೂಲನೆ ಮಾಡುತ್ತೇವೆ ಎಂದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement