ದೇಶಿ ನಿರ್ಮಿತ ಯುದ್ಧ ಟ್ಯಾಂಕರ್‌ ಅರ್ಜುನ ಲೋಕಾರ್ಪಣೆ

ಚೆನ್ನೈ: ಸ್ವದೇಶಿ ನಿರ್ಮಿತ ಅರ್ಜುನ ಯುದ್ಧ ಟ್ಯಾಂಕರ್ (ಎಂಕೆ-೧ಎ) ಅನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಹಸ್ತಾಂತರಿಸಿದರು.
ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಸ್ವದೇಶಿ ನಿರ್ಮಿತ ಅರ್ಜುನ ಯುದ್ಧ ಟ್ಯಾಂಕರ್‌ನ ಭೂಸೇನೆಯ ಮುಖ್ಯಸ್ಥ ಜರ್ನಲ್ ಎಂ.ಎಂ ನರ್‌ವಾಣೆ ಅವರಿಗೆ ನೀಡಿದರು.
ಈ ಅರ್ಜುನ ಯುದ್ಧ ಟ್ಯಾಂಕರ್‌ನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಸಿವಿಆರ್‌ಡಿಇ, ಡಿಆರ್‌ಡಿಓ ಸೇರಿದಂತೆ ೧೫ ಸಂಸ್ಥೆಗಳು ಈ ಟ್ಯಾಂಕ್ ಅಭಿವೃದ್ಧಿಯಲ್ಲಿ ಕೆಲಸ ಮಾಡಿವೆ.ಈ ಅರ್ಜುನ ಯುದ್ಧ ಟ್ಯಾಂಕರ್‌ನ್ನು ಭಾರತ ಗಡಿಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.
ತಮಿಳುನಾಡಿನ ರಾಜ್ಯಪಾಲ ಬನ್ವಾರ್‌ಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಮೊದಲಾದವರು ಇದ್ದರು.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ನಿಮ್ಮ ಕಾಮೆಂಟ್ ಬರೆಯಿರಿ

advertisement