೫ರೂ ದಲ್ಲಿ ಭೋಜನ ನೀಡುವ “ಮಾʼ ಯೋಜನೆಗೆ ಚಾಲನೆ ನೀಡಿದ ದೀದಿ

ಪಶ್ಚಿಮ ಬಂಗಾಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡಜನರಿಗೆ ೫ ರೂ.ದಲ್ಲಿ ಭೋಜನ ನೀಡುವ “ಮಾʼ ಯೋಜನೆಗೆ ಚಾಲನೆ ನೀಡಿದರು.
ರಾಜ್ಯ ಸರಕಾರ ಬಡಜನರಿಗೆ ಕೇವಲ ೫ ರೂ.ಗಳಲ್ಲಿ ಭೋಜನ ನೀಡಲಿದೆ. ಭೋಜನವು ಒಂದು ಬಟ್ಟಲು ಅನ್ನ, ದಾಲ್‌, ತರಕಾರಿ, ಮೊಟ್ಟೆಯ ಕರಿ ಒಳಗೊಂಡಿರಲಿದೆ. ಪ್ರತಿ ಪ್ಲೇಟ್‌ ಊಟಕ್ಕೆ ರಾಜ್ಯ ಸರಕಾರ ೧೫ ರೂ. ವ್ಯಯಿಸಲಿದೆ. ಸ್ವ ಸಹಾಯ ಗುಂಪುಗಳು ಪ್ರತಿ ದಿನ ಮಧ್ಯಾಹ್ನ ೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಅಡುಗೆ ಮನೆಯ ನಿರ್ವಹಣೆ ಮಾಡಲಿದ್ದು, ಇಂಥ ಅಡುಗೆ ಮನೆಗಳನ್ನು ರಾಜ್ಯದಾದ್ಯಂತ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.

ಎಪ್ರಿಲ್‌-ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆಗಳ ವರದಿ ಹಿನ್ನೆಲೆಯಲ್ಲಿ ರಾಜ್ಯದ ಜನರನ್ನು ಸೆಳೆಯುವ ದಿಸೆಯಲ್ಲಿ ಯೋಜನೆ ಘೋಷಿಸಿದ್ದಾರೆ ಎಂದೇ ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement