ಟೂಲ್ಕಿಟ್ ರಚನೆ ಕುರಿತು ನಿಕಿತಾ ಜೇಕಬ್ ಹಾಗೂ ಶಾಂತನು ವಿರುದ್ದ ಜಾಮೀನು ರಹಿತ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ವಕೀಲರಾದ ನಿಕಿತಾ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಜಾಮೀನು ಕೋರಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದಿಶಾ ರವಿ ಬಂಧನಕ್ಕೊಳಗಾದ ೧ ದಿನದ ನಂತರ ದೆಹಲಿ ಪೊಲೀಸರು ರೈತರ ಪ್ರತಿಭಟನೆ ಕುರಿತ ಟೂಲ್ಕಿಟ್ ರಚನೆ ಆರೋಪ ಕುರಿತು ಇಬ್ಬರು ಕಾರ್ಯಕರ್ತರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು. ಪೊಲೀಸರ ಯಾವುದೇ ಬಲವಂತದ ಕ್ರಮಗಳಿಂದ ಮಧ್ಯಂತರ ರಕ್ಷಣೆ ಮತ್ತು ಆಕೆಯ ವಿರುದ್ಧ ದಾಖಲಾದ ಎಫ್ಐಆರ್ ನಕಲನ್ನು ಸಹ ಅವರು ಕೋರಿದ್ದಾರೆ. ಇದು ಮಂಗಳವಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.
ಅರ್ಜಿದಾರರಿಗೆ ಟೂಲ್ಕಿಟ್ ತಿದ್ದುಪಡಿ ಮಾಡಲು ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಆರ್ಥಿಕ ಉದ್ದೇಶಗಳಿಲ್ಲ. ಕೆಲವು ಟ್ರೋಲರ್ಗಳು ಮತ್ತು ಬಾಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳು ಸೇರಿದಂತೆ ತಮ್ಮ ವೈಯಕ್ತಿಕ ಮಾಹಿತಿ ಪ್ರಸಾರ ಮಾಡುತ್ತಿದ್ದಾರೆ ಎಂದು ನಿಕಿತಾ ಅರ್ಜಿಯಲ್ಲಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ