ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುವಿರಾ: ಮಮತಾಗೆ ಬಿಜೆಪಿ ಸವಾಲು

ಕೋಲ್ಕತ್ತಾ: ವಿಜಯದ ವಿಶ್ವಾಸವಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುವುದಾಗಿ ಘೋಷಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬಿಜೆಪಿ ಸವಾಲು ಹಾಕಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಂಗಾಳದ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಅವರು, ನೀವು ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುತ್ತೀರಾ ಎಂಬುದರ ಕುರಿತು ಘೋಷಣೆ ಮಾಡುವಂತೆ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸಿದರು.
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರವೇ ತನ್ನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಜನವರಿಯಲ್ಲಿ ನಂದಿಗ್ರಾಮದಲ್ಲಿ ನಡೆದ ಟಿಎಂಸಿ ಸಮಾವೇಶದಲ್ಲಿ ಬ್ಯಾನರ್ಜಿ ತಾವು ಇಲ್ಲಿಂದಲೂ ಸ್ಪರ್ಧಿಸುವುದಾಗಿ ಘೋಷಿಸಿದ್ದರು.ಹೀಗಾಗಿ ವಿಜಯ ವರ್ಗಿಯಾ ತಮ್ಮ ಟ್ವೀಟ್‌ನಲ್ಲಿ “ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆದರೆ, ಅವರು ಇಲ್ಲಿಂದ ಮಾತ್ರ ಸ್ಪರ್ಧಿಸುವುದಾಗಿ ಹೇಳಿಲ್ಲ. ಅವರಿಗೆ ಗೆಲುವಿನ ವಿಶ್ವಾಸವಿದ್ದರೆ ನಂದಿಗ್ರಾಮದಿಂದ ಮಾತ್ರ ಸ್ಪರ್ಧಿಸುವುದಾಗಿ ಘೋಷಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಅಲ್ಲದಿದ್ದರೆ, ನೀವು ನಂದಿಗ್ರಾ ಕ್ಷೇತ್ರವನ್ನು ನಂಬುವುದಿಲ್ಲ ಎಂದು ಅರ್ಥವಾಗುತ್ತದೆ ಎಂದೂ ಮಮತಾ ಅವರಿಗೆ ಹೇಳಿದ್ದಾರೆ.
ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂದಿನ ಎಡಪಂಥೀಯ ಸರ್ಕಾರದ ಯೋಜನೆಯ ನಂತರ 2007 ರಲ್ಲಿ ನಂದಿಗ್ರಾಮ ಕೃಷಿ-ವಿರೋಧಿ ಸ್ವಾಧೀನ ಚಳವಳಿಗೆ ಸಾಕ್ಷಿಯಾಯಿತು.
ಇದೇ ಚಳವಳಿ ಬಳಸಿಕೊಂಡೇ ಟಿಎಂಸಿ ೨೦೧೧ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಅಧಿಕಾರಕ್ಕೆ ಬರುವ ಮೂಲಕ ಎಡಪಕ್ಷಗಳ 34 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು.
2016ರಲ್ಲಿ ಪೂರ್ವ ಮಿಡ್ನಾಪುರ ಜಿಲ್ಲೆಯ ನಂದಿಗ್ರಾಮ ಕ್ಷೇತ್ರವನ್ನು ಅಂದಿನ ಟಿಎಂಸಿ ಪ್ರಭಾವಿ ನಾಯಕ ಸುವೆಂದು ಅಧಿಕಾರಿ ಗೆದ್ದರು, ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮಮತಾ ಬ್ಯಾನರ್ಜಿ ನಂದಿ ಗ್ರಾಮದಿಂದ ಸ್ಪರ್ಧಿಸಿದರೆ 50,000 ಮತಗಳಿಂದ ಸೋಲಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದರು.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement