ಕಬ್ಬಿಣ ಅದಿರು ಗಣಿ ಪ್ರಕರಣದಲ್ಲಿ ವರವರರಾವ್‌‌ಗೆ ಜಾಮೀನು

ನಾಗಪುರ: ಸೂರಜ್‌ಗರ ಕಬ್ಬಿಣ ಅದಿರು ಗಣಿ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ವರವರರಾವ್‌ಗೆ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠ ಜಾಮೀನು ನೀಡಿದೆ.
೮೨ ವರ್ಷದ ವರವರರಾವ್‌ ಹಾಗೂ ನ್ಯಾಯವಾದಿ ಸುರೇಂದ್ರ ಗದ್ಲಿಂಗ್‌ ಗಡಚಿರೋಲಿ ಠಾಣೆ ಪೊಲೀಸರು ೨೦೧೯ರ ಫೆಬ್ರವರಿಯಲ್ಲಿ ಬಂಧಿಸಿದ್ದರು. ನ್ಯಾಯಮೂರ್ತಿ ಸ್ವಪ್ನಾ ಜೋಶಿ ಜಾಮೀನು ನೀಡಿದರು. ವರವರರಾವ್‌ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ವೈದ್ಯಕೀಯ ಸ್ಥಿತಿ ಆಧಾರದ ಮೇಲೆ ಜಾಮೀನು ನೀಡಬೇಕೆಂದು ವಕೀಲರಾದ ಫಿರ್ದೋಸ್‌ ಮಿರ್ಜಾ ಮತ್ತು ನಿಹಾಲ್‌ ಸಿಂಗ್‌ ಮನವಿ ಮಾಡಿದ್ದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ನಿಮ್ಮ ಕಾಮೆಂಟ್ ಬರೆಯಿರಿ

advertisement