ಡಿಜಿಪಿ ರಾಜೇಶ ದಾಸ ವಿರುದ್ಧ ಲೈಂಗಿಕ ಕಿರುಕುಳ ದೂರಿಗೆ ವಿಚಾರಣೆ ಸಮಿತಿ ರಚನೆ

ಚೆನ್ನೈ; ತಮಿಳುನಾಡು ವಿಶೇಷ ಪೊಲೀಸ್ ಮಹಾನಿರ್ದೇಶಕರು (ಕಾನೂನು ಸುವ್ಯವಸ್ಥೆ) ರಾಜೇಶ್ ದಾಸ್ ಅವರ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ನೀಡಿದ ದೂರಿನ ತನಿಖೆಗಾಗಿ ತಮಿಳುನಾಡು ಗೃಹ ಇಲಾಖೆ ಬುಧವಾರ ಆರು ಸದಸ್ಯರ ವಿಚಾರಣಾ ಸಮಿತಿ ರಚಿಸಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಯೋಜನೆ ಮತ್ತು ಅಭಿವೃದ್ಧಿ) ಜಯಶ್ರೀ ರಘುನಂದನ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ ಎಂದು ಗೃಹ ಕಾರ್ಯದರ್ಶಿ ಎಸ್.ಕೆ.ಪ್ರಭಾಕರ್ ಆದೇಶ ಹೊರಡಿಸಿದ್ದಾರೆ.
ರಾಜೇಶ್ ದಾಸ್ ತನ್ನ ವಾಹನದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ. ಮಹಿಳೆಯನ್ನು ದೂರು ನೀಡದಂತೆ ತಡೆಯಲು ಸಹ ಅಧಿಕಾರಿಗಳು ಪ್ರಯತ್ನಿಸಿದ್ದಾರೆ. “ಆದರೂ ಅವಳು ದೂರು ನೀಡಿದ್ದಾಳೆ, ಅನೇಕ ಮಹಿಳಾ ಅಧಿಕಾರಿಗಳು ಅವಳ ಧೈರ್ಯಕ್ಕಾಗಿ ಅಭಿನಂದಿಸಿದ್ದಾರೆ”ಎಂಬುದಾಗಿ ಮೂಲಗಳು ತಿಳಿಸಿವೆ ಎಂದು ದಿ ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.
ಸೀಮಾ ಅಗರ್ವಾಲ್, (ಹೆಚ್ಚುವರಿ ಡಿಜಿಪಿ), ಎ. ಅರುಣ್ (ಐಜಿಪಿ), ಶಮುಂದೇಶ್ವರಿ (ಉಪ ಐಜಿ), ವಿ.ಕೆ.ರಮೇಶ್ ಬಾಬು (ಡಿಜಿಪಿ ಕಚೇರಿಯಲ್ಲಿ ಮುಖ್ಯ ಆಡಳಿತಾಧಿಕಾರಿ) ಮತ್ತು ಅಂತಾರಾಷ್ಟ್ರೀಯ ನ್ಯಾಯ ಮಿಷನ್‌ನ ಭಾಗವಾಗಿರುವ ಲೊರೆಟ್ಟಾ ಝೋನಾ ಕೂಡ ಸಮಿತಿಯ ಭಾಗವಾಗಲಿದ್ದಾರೆ.
ಬುಧವಾರ ಬೆಳಿಗ್ಗೆ ಡಿಎಂಕೆ ಮುಖಂಡ ಕನಿಮೋಳಿ ಈ ಪ್ರಕರಣದ ಬಗ್ಗೆ ಟ್ವೀಟ್ ಮಾಡಿದ್ದು, ಸರ್ಕಾರ ಅಧಿಕಾರಿಯ ದೂರಿನ ಮೇರೆಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದಾದ ಕೆಲವು ಗಂಟೆಗಳ ನಂತರ ತನಿಖಾ ಸಮಿತಿಯ ಪ್ರಕಟಣೆ ಬಂದಿದೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement