ಸಂಸದ ಡೆಲ್ಕರ್‌ ಸಾವಿನ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ಸೋಮವಾರ ಮುಂಬೈ ಹೋಟೆಲ್‌ವೊಂದರಲ್ಲಿ ನೇಣು ಬಿಗಿದುಕೊಂಡು ರಾಷ್ಟ್ರೀಯ ರಾಜಕೀಯ ವಲಯಗಳಲ್ಲಿ ಚರ್ಚಗೆ ಗ್ರಾಸವಾದ ದಾದ್ರಾ ಮತ್ತು ನಗರ ಹವೇಲಿಯ ಸ್ವತಂತ್ರ ಸಂಸದ ಮೋಹನ್ ಎಸ್. ಡೆಲ್ಕರ್ ಅವರ ಆತ್ಮಹತ್ಯೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಶುಕ್ರವಾರ ಒತ್ತಾಯಿಸಿದೆ.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಪವನ್ ಖೇರಾ, “ಅವರು ಭಾರತೀಯ ಜನತಾ ಪಕ್ಷದ ಕಿರುಕುಳದಿಂದ ಬೇಸರಗೊಂಡು ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ದಾದ್ರಾ ಮತ್ತು ನಗರ ಹವೇಲಿ ಯುಟಿಯ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರನ್ನು ತನಿಖೆ ಮಾಡಬೇಕು ನ್ಯಾಯಾಂಗ ವಿಚಾರಣೆ ಮಾತ್ರ ಸತ್ಯವನ್ನು ಹೊರತರುತ್ತದೆ ಎಂದು ಹೇಳಿದ್ದಾರೆ.

ಅವರು ಲೋಕಸಭೆಯಲ್ಲಿ ಮಾತನಾಡಿದ್ದಲ್ಲದೆ ಕಳೆದ ವರ್ಷ ಡೆಲ್ಕರ್ ಅವರೇ ವಿವರವಾದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ, ಇದರಲ್ಲಿ ಬಿಜೆಪಿಯ ಆಜ್ಞೆಯ ಮೇರೆಗೆ ತಾನು ಅನುಭವಿಸಿದ ಚಿತ್ರಹಿಂಸೆ ಇದೆ ಎಂದರು. ಅವರು ಕೆಲವು ಬಿಜೆಪಿ ನಾಯಕರ ಹೆಸರನ್ನು ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಅವರ ವಿವರವಾದ ಆತ್ಮಹತ್ಯೆ ಟಿಪ್ಪಣಿಯಲ್ಲಿ, ಅವರು ಗುಜರಾತ್ ಮಾಜಿ  ಗೃಹ ಸಚಿವರಾಗಿರುವ ಪ್ರಫುಲ್ ಪಟೇಲ್ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರನ್ನು ಹೆಸರಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಖೇರಾ ಹೇಳಿದರು.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

, ವಕ್ತಾರ ಸಚಿನ್ ಸಾವಂತ್, ರಾಜು ವಾಘಮರೆ, ವಿನಯ್ ಖಮ್ಕರ್ ಮತ್ತು ಇತರರು ನೇತೃತ್ವದ ರಾಜ್ಯ ಕಾಂಗ್ರೆಸ್ ನಿಯೋಗವು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಸನ್ನಿವೇಶಗಳು ಮತ್ತು ಡೆಲ್ಕರ್ ಅವರ ಹಿಂದೆ ಬಿಜೆಪಿಯ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿತು.

ದಾದ್ರಾ ಮತ್ತು ನಗರ ಹವೇಲಿಯ ಏಳು ಬಾರಿ ಸ್ವತಂತ್ರ ಸಂಸದರಾದ ಡೆಲ್ಕರ್ ಸೋಮವಾರ ಬೆಳಿಗ್ಗೆ ಮುಂಬೈ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಬುಡಕಟ್ಟು ಕೃಷಿಕ ಮತ್ತು ಭಾರತೀಯ ನವಶಕ್ತಿ ಪಕ್ಷದ ಮುಖಂಡ ಡೆಲ್ಕರ್ (58) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಪ್ರೈಮಾ ಫೇಸಿ ಶಂಕಿಸಿದ್ದಾರೆ. ಹಲವಾರು ಪುಟಗಳಲ್ಲಿ ವಿವರವಾದ ಆತ್ಮಹತ್ಯೆ ಪತ್ರವನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

ಡೆಲ್ಕರ್ ಅವರ ಶವವನ್ನು ಆತನ ಚಾಲಕ ಪತ್ತೆ ಮಾಡಿದ್ದು, ನಂತರ ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement